ಬಂಜರು ಬದುಕು - Kannada Kavanagalu about life - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಬಂಜರು ಬದುಕು - Kannada Kavanagalu about life

ಬಂಜರು ಬದುಕು - Kannada Kavanagalu about life


೧) ಬಂಜರು ಬದುಕು

ಇತ್ತೀಚಿಗೆ ನನಗೆ ತುಂಬಾನೆ ಬೇಜಾರು
ಯಾಕಂದ್ರೆ ಈ ಭೂಮಿಯೀಗ ಬಂಜರು.
ಎಲ್ಲಿ ಕಟ್ಟಿಕೊಳ್ಳಲಿ ನನ್ನ ನೆಮ್ಮದಿಯ ಸೂರು?
ನನಗೆ ಎಲ್ಲಿಯೂ ಕಾಣುತ್ತಿಲ್ಲ 
ನಿಜವಾದ ಸ್ನೇಹ ಪ್ರೀತಿ ಒಂಚೂರು...

Kannada Kavanagalu about life

ಯಾರನ್ನು ನಂಬಲಿ?  
ಯಾರನ್ನು ಬಿಡಲಿ?
ಯಾರನ್ನು ಪ್ರೀತಿಸಲಿ?
ಯಾರನ್ನು ದ್ವೇಷಿಸಲಿ?
ಯಾರಿಗಾಗಿ ಬದುಕಲಿ? 
ಯಾರಿಗಾಗಿ ಸಾಯಲಿ?


Kannada Kavanagalu about life

ಯಾವುದನ್ನು ನೆನೆಯಲಿ?
ಯಾವುದನ್ನು ಮರೆಯಲಿ?
ಯಾರೊಡನೆ ಬದುಕ ಸಾಗಿಸಲಿ?
ನನ್ನ ಬದುಕಾಗಿದೆ ಈಗ ಬಂಜರು 
ಅದಕ್ಕೆ ನನಗೆ ಎಲ್ಲರ ಮೇಲೆ
ವಿಪರೀತ ಬೇಜಾರು...

Kannada Kavanagalu about life

೨) ಲಂಚಾವತಾರ... 

ಲಂಚಾವತಾರ ತುಂಬಾ ಭಯಂಕರ
ಲಂಚಕ್ಕೆ ಬೆಚ್ಚಿ ಬಿದ್ದ ಶಿವಶಂಕರ
ನೀವಾಗದಿರಿ ಲಂಚದ ಕಿಂಕರ
ಭ್ರಷ್ಟರಿಗೆ ಹೇಳಿರಿ ದೊಡ್ಡ ಧಿಕ್ಕಾರ...

Kannada Kavanagalu about corruption

ತೋರಿ ದೇಶದೆಡೆಗೆ ಸ್ವಲ್ಪ ಮಮಕಾರ
ಸರ್ಕಾರಿ ಕೆಲ್ಸದಿಂದ ಆಗ್ಬೇಡಿ ಸಾಹುಕಾರ
ಕೇಳಿಸಿರಿ ಸ್ವಚ್ಛ ಕರ್ಮದ ಓಂಕಾರ
ಮೊಳಗಿಸಿರಿ ನಿರ್ಮಲ ಭಾರತದ ಝೇಂಕಾರ...

Kannada Kavanagalu about corruption

ಸ್ವಚ್ಛವಾಗಿದ್ದರೆ ಆಯ್ದ ಸರ್ಕಾರ
ಮಾತ್ರ ಹಾಕಿರಿ ಅದಕ್ಕೆ ಜೈಜೈಕಾರ
ಸರ್ಕಾರವೇ ನಡೆಸಿದರೆ ಭ್ರಷ್ಟಾಚಾರ
ತೋರಿಸಿರಿ ಪ್ರಜಾಪ್ರಭುತ್ವದ ಅಧಿಕಾರ...

Kannada Kavanagalu about corruption

ಮಾಡಿರಿ ಅಭಿವೃದ್ಧಿಯ ಕನಸಿನ ಸಾಕಾರ
ರಾತ್ರಿಯಲ್ಲೂ ನಡೆಯಲಿ ಸ್ವಚ್ಛ ವ್ಯವಹಾರ
ಅಡ್ಡದಾರಿ ವಿರುದ್ಧ ಎತ್ತಿ ಚಕಾರ
ಮೇಲೆ ಬನ್ನಿ ಸುರಿಸಿ ನಿಮ್ಮ ಸ್ವಂತ ಬೆವರ...

Kannada Kavanagalu about corruption

೩) ಸಮಯ ಸಾಧಕರು...

Kannada Kavanagalu about life


"ಅನುಭವವಿರುವಲ್ಲಿ ಅಮೃತವಿದೆ"
ಎಂದರು ಬಲ್ಲವರು...

"ಅತೀಯಾದರೆ ಅಮೃತವೂ ವಿಷ"
ಎಂದರು ದಿವಿಜರು...

"ಮಿತವಾದರೆ ವಿಷವೂ ಅಮೃತ"
ಎಂದರು ಮಹಾಂತರು...

"ದುರಾಸೆಯೆ ದು:ಖಕ್ಕೆ ಮೂಲ"
ಎಂದರು ಜ್ಞಾನಿಯರು...

"ಪ್ರೀತಿಗೆ ಎಂದೂ ಸಾವಿಲ್ಲ"
ಎಂದರು ಪ್ರೇಮಿಯರು...

"ನೀವು ಸಾಕಾಗುವಷ್ಟು ಹೇಳಿ. 
ಆದರೆ ನಾವು ಸತ್ರೂ ಕೇಳಲ್ಲ"
ಎಂದರು ಗಾವಿಲರು...

"ಹೇಳೋದು ಸುಲಭ. ಆದರೆ ಆಚರಣೆ 
ದುರ್ಲಭವೆಂದು ತಿಳಿದು ಸುಮ್ಮನಿರಿ"
ಎಂದರು ಸಮಯಸಾಧಕರು...
Blogger ನಿಂದ ಸಾಮರ್ಥ್ಯಹೊಂದಿದೆ.