ವಿದ್ವಾಂಸರ ಪಾಂಡಿತ್ಯ ಪರೀಕ್ಷೆ - ತೆನಾಲಿ ರಾಮಕೃಷ್ಣನ ಹಾಸ್ಯ ಕಥೆಗಳು - Stories of Tenali Ramakrishna in Kannada - tenali rama stories in kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ವಿದ್ವಾಂಸರ ಪಾಂಡಿತ್ಯ ಪರೀಕ್ಷೆ - ತೆನಾಲಿ ರಾಮಕೃಷ್ಣನ ಹಾಸ್ಯ ಕಥೆಗಳು - Stories of Tenali Ramakrishna in Kannada - tenali rama stories in kannada

ವಿದ್ವಾಂಸರ ಪಾಂಡಿತ್ಯ ಪರೀಕ್ಷೆ - ತೆನಾಲಿ ರಾಮಕೃಷ್ಣನ ಹಾಸ್ಯ ಕತೆಗಳು

                            ಶ್ರೀಕೃಷ್ಣ ದೇವರಾಯನ ಉತ್ತಮ ಆಡಳಿತದಿಂದಾಗಿ ವಿಜಯನಗರ ಸಾಮ್ರಾಜ್ಯ ಸಿರಿವಂತಿಕೆಯ ಉತ್ತುಂಗಕ್ಕೆ ತಲುಪಿತು. ರಾಜಧಾನಿ ಹಂಪಿಯಲ್ಲಿ ಸುವರ್ಣಯುಗ ನಿರ್ಮಾಣವಾಯಿತು. ಜನರೆಲ್ಲ ಷೇರುಗಳಲ್ಲಿ ಮುತ್ತು ರತ್ನಗಳನ್ನು ಮಾರುವಷ್ಟು ಶ್ರೀಮಂತರಾದರು. ಜೊತೆಗೆ ಆಸ್ಥಾನದಲ್ಲಿದ್ದ ವಿದ್ವಾಂಸರ ಬುದ್ಧಿಮತ್ತೆಯಿಂದಾಗಿ ವಿಜಯನಗರ ಸಾಮ್ರಾಜ್ಯದ ಕೀರ್ತಿ ಎಲ್ಲೆಡೆಗೆ ಹಬ್ಬಲು ಶುರುವಾಯಿತು. ಒಂದಿನ ಶ್ರೀ ಕೃಷ್ಣ ದೇವರಾಯನಿಗೆ ತನ್ನ ಆಸ್ಥಾನದಲ್ಲಿರುವ ವಿದ್ವಾಂಸರೆಲ್ಲರನ್ನು ಪರೀಕ್ಷಿಸುವ ಆಸೆಯಾಯ್ತು. ಅದಕ್ಕಾಗಿ ಆತ ಒಂದು ಸಭೆಯನ್ನು   ಏರ್ಪಡಿಸಿದನು. ರಾಜಾಜ್ಞೆ ಮೇರೆಗೆ ಎಲ್ಲ ವಿದ್ವಾಂಸರು ಸಭೆಗೆ ಹಾಜರಾದರು. ಆಗ ಶ್ರೀಕೃಷ್ಣ ದೇವರಾಯ ಎಲ್ಲರ ಬುದ್ಧಿಮತ್ತೆ ಪರಿಕ್ಷೆಗಾಗಿ ಒಂದು ಪ್ರಶ್ನೆಯನ್ನು ಹಾಕಿದನು. "ವಿದ್ವಾಂಸರೇ ಕ್ಷತ್ರಿಯ ವೈಶ್ಯ ಹಾಗೂ ಶೂದ್ರರಿಗೆ ಬ್ರಾಹ್ಮಣರು ಪೂಜ್ಯರಾಗಿರುವಂತೆ ಬ್ರಾಹ್ಮಣರಿಗೆ ಪೂಜ್ಯವಾದದ್ದು ಯಾವುದು?" ಎಂಬ ಪ್ರಶ್ನೆಯನ್ನು ಶ್ರೀಕೃಷ್ಣ ದೇವರಾಯ ಕೇಳಿದನು. ಆಗ ವಿದ್ವಾಂಸರೆಲ್ಲರೂ ತಮ್ಮ ತಮ್ಮಲ್ಲೇ ಚರ್ಚಿಸತೊಡಗಿದರು. ಅವರ ಚರ್ಚೆಯಾದ ನಂತರ ಅವರೆಲ್ಲರು ಒಕ್ಕೊರಲಿನಿಂದ "ಮಹಾಪ್ರಭು ಗೋವು ಬ್ರಾಹ್ಮಣರಿಗೆ ಪೂಜ್ಯವಾದದ್ದು" ಎಂದು ಉತ್ತರಿಸಿದರು. ಆದರೆ ತೆನಾಲಿ ರಾಮಕೃಷ್ಣ ಏನನ್ನು ಉತ್ತರಿಸದೆ ಸುಮ್ಮನಿದ್ದನು. ಅವನನ್ನು ಗಮನಿಸಿದ ಶ್ರೀಕೃಷ್ಣ ದೇವರಾಯ "ಯಾಕೆ ರಾಮಕೃಷ್ಣ ನೀನೇನು ಉತ್ತರಿಸುವುದಿಲ್ಲವೇ..?" ಎಂದು ಪ್ರಶ್ನಿಸಿದನು. ಆಗ ರಾಮಕೃಷ್ಣ "ಮಹಾಪ್ರಭು ವಿದ್ವಾಂಸರು ಹೇಳಿದ್ದು ಸರಿಯಾಗಿದೆ. ಗೋವು ಎಲ್ಲರಿಂದಲೂ ಪೂಜಿಸಿಕೊಳ್ಳುತ್ತದೆ. ಮಾನವರಷ್ಟೆ ಅಲ್ಲದೇ ದೇವತೆಗಳು ಸಹ ಗೋವನ್ನು ಪೂಜಿಸುತ್ತಾರೆ" ಎಂದೇಳಿ ಸುಮ್ಮನಾದನು.

ವಿದ್ವಾಂಸರ ಪಾಂಡಿತ್ಯ ಪರೀಕ್ಷೆ - ತೆನಾಲಿ ರಾಮಕೃಷ್ಣನ ಹಾಸ್ಯ ಕತೆಗಳು

                        ಶ್ರೀಕೃಷ್ಣ ದೇವರಾಯನಿಗೆ ವಿದ್ವಾಂಸರನ್ನು ಮತ್ತಷ್ಟು ಪರೀಕ್ಷಿಸುವ ಮನಸ್ಸಾಯಿತು. ಅದಕ್ಕಾಗಿ ಆತ "ಹಾಗೋ ಸರಿ, ಎಲ್ಲರಿಂದಲೂ ಪೂಜಿಸಿಕೊಳ್ಳುವ ಪರಮ ಶ್ರೇಷ್ಟ ಗೋವಿನ ಚರ್ಮದ ಪಾದರಕ್ಷೆಗಳನ್ನು ಬ್ರಾಹ್ಮಣರೇಕೆ ತೊಡುವರು?" ಎಂಬ ಪ್ರಶ್ನೆಯನ್ನು ವಿದ್ವಾಂಸರ ಮುಂದಿಟ್ಟನು. ರಾಯ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ವಿದ್ವಾಂಸರೆಲ್ಲ ಒಬ್ಬರ ಮುಖ ಮತ್ತೊಬ್ಬರು ನೋಡಿಕೊಳ್ಳತೊಡಗಿದರು. ಉತ್ತರ ಹೊಳೆಯದೆ ತೆಪ್ಪಗಿದ್ದುಬಿಟ್ಟರು. ಆಗ ರಾಯ ಸರಿಯಾದ ಉತ್ತರ ಕೊಟ್ಟವರಿಗೆ ಸೂಕ್ತ ಬಹುಮಾನ ಕೊಡಲಾಗುವುದೆಂದು ಘೋಷಿಸಿದನು. ಆಗ ತೆನಾಲಿ ರಾಮಕೃಷ್ಣ "ಪ್ರಭು, ಬ್ರಾಹ್ಮಣರ ಪಾದಗಳೆಂದರೆ ಪುಣ್ಯಕ್ಷೇತ್ರಗಳಿದ್ದಂತೆ. ಸತ್ತ ಗೋವಿಗೆ ಮೋಕ್ಷ ಕೊಡಿಸುವುದಕ್ಕಾಗಿ ಬ್ರಾಹ್ಮಣರು ಆಕಳ ಚರ್ಮದ ಪಾದರಕ್ಷೆಗಳನ್ನು ಮೆಟ್ಟುತ್ತಾರೆ " ಎಂದೇಳಿದನು. ಅವನ ಉತ್ತರ ಸರಿಯಾಗಿತ್ತು. ಅವನ ಜಾಣ್ಮೆಗೆ ಶ್ರೀಕೃಷ್ಣ ದೇವರಾಯ ತಲೆದೂಗಿದನು. ಜೊತೆಗೆ ಸೂಕ್ತ ಬಹುಮಾನವನ್ನು ನೀಡಿ ಅವನನ್ನು ಸತ್ಕರಿಸಿದನು... The End...   
ವಿದ್ವಾಂಸರ ಪಾಂಡಿತ್ಯ ಪರೀಕ್ಷೆ - ತೆನಾಲಿ ರಾಮಕೃಷ್ಣನ ಹಾಸ್ಯ ಕತೆಗಳು
Blogger ನಿಂದ ಸಾಮರ್ಥ್ಯಹೊಂದಿದೆ.