"ನೆಗೆಟಿವ್ ಆಲೋಚನೆಗಳಿಂದ ಹೊರ ಬರುವುದು ಹೇಗೆ...?" ಎನ್ನುವುದನ್ನು ನೋಡುವುದಕ್ಕಿಂತ ಮುಂಚೆ ಈ ನೆಗೆಟಿವ್ ಆಲೋಚನೆಗಳಿಗೆ ಕಾರಣವೇನೆಂಬುದನ್ನು ನೋಡೋಣಾ. ಹೇಗೆ ನಿಂತ ನೀರಿನಲ್ಲಿಯೇ ಸೊಳ್ಳೆಗಳು ಬೆಳೆಯುತ್ತವೆಯೋ, ಅದೇ ರೀತಿ ಕೆಲಸವಿಲ್ಲದೆ ಖಾಲಿ ಕುಂತ ಮನುಷ್ಯನಲ್ಲಿ ನೆಗೆಟಿವ್ ಆಲೋಚನೆಗಳು ಬೆಳೆಯುತ್ತವೆ. ಕ್ರಿಯೆಟಿವ್ ಕೆಲಸಗಳಲ್ಲಿ ತೊಡಗಿಸಿಕೊಳ್ಳದೆ ಟೈಮಪಾಸ್ ಮಾಡುವ ಆಲಸಿ ವ್ಯಕ್ತಿಯಲ್ಲಿ ನೆಗೆಟಿವ್ ಆಲೋಚನೆಗಳು ಬೆಳೆಯುತ್ತವೆ. ಸದ್ಯಕ್ಕೆ ಕೈಯಲ್ಲಿರುವ ಕೆಲಸ ಮಾಡದೆ ಅನಾವಶ್ಯಕವಾಗಿ ಚಿಂತಿಸುತ್ತಾ ಕಾಲಹರಣ ಮಾಡುವ ವ್ಯಕ್ತಿಯಲ್ಲಿ ನೆಗೆಟಿವ್ ಆಲೋಚನೆಗಳು ಬೆಳೆಯುತ್ತವೆ. ಈ ನೆಗೆಟಿವ್ ಆಲೋಚನೆಗಳು ನಿಮ್ಮ ಅಪಯಶಸ್ಸಿಗೆ ನೇರ ಕಾರಣವಾಗುತ್ತವೆ. ಈ ನೆಗೆಟಿವ್ ಆಲೋಚನೆಗಳು ನಿಮ್ಮ ನೆಮ್ಮದಿಯನ್ನು ಕಿತ್ತು ಕೊಳ್ಳುತ್ತವೆ. ಆದ್ದರಿಂದ ಇಂಥ ನೆಗೆಟಿವ್ ಆಲೋಚನೆಗಳನ್ನು ನೀವು ಹೊಡೆದುರುಳಿಸಲೇಬೇಕು.
ನೆಗೆಟಿವ್ ಆಲೋಚನೆಗಳಿಂದ ಹೊರಬರಲು ಕೆಲವು ಸೂಕ್ತ ಸಲಹೆಗಳು ಇಲ್ಲಿವೆ ;
೧) ದಿನಾಲು ತಪ್ಪದೆ ಸುರ್ಯೋದಯಕ್ಕಿಂತ ಮುಂಚೆಯೆದ್ದು ಎಕ್ಸರಸೈಜ ಮಾಡಿ. ಯೋಗಾ ಮಾಡಿ. ಧ್ಯಾನ ಮಾಡಿ. ವಾಕಿಂಗ್ ರನ್ನಿಂಗ್, ಸಿಂಗಿಂಗ್, ಡ್ಯಾನ್ಸಿಂಗ್ ನಿಮಗಿಷ್ಟಗಿರುವ ಯಾವುದಾದರೂ ಒಂದನ್ನು ಮಾಡಿ. ಯಾವಾಗಲೂ ಹೆಲ್ದಿಯಾಗಿರಿ, ಹ್ಯಾಪ್ಪಿಯಾಗಿರಿ. ಸದಾ ನಗುತ್ತಿರಿ.
೨) ನಿಮ್ಮ ಸುತ್ತಮುತ್ತಲಿರುವ ಶಕುನಿಗಳಿಂದ ಸ್ವಲ್ಪ ದೂರವಿರಿ. ಯಾವಾಗಲೂ ಕೆಟ್ಟ ಸುದ್ದಿಗಳನ್ನೇ ನಿಮ್ಮ ಕಿವಿಗೆ ತುಂಬುವವರಿಂದ ದೂರವಿರಿ. ನಿಮ್ಮ ಸುತ್ತಲೂ ಪೊಸಿಟಿವ್ ಜನರನ್ನು ಇಟ್ಟುಕೊಳ್ಳಿ. ಒಳ್ಳೆ ವ್ಯಕ್ತಿಗಳ ಗೆಳೆತನ ಮಾಡಿ. ಏಕೆಂದರೆ ನೀವು ನಿಮ್ಮ ಸುತ್ತಲಿರುವ 5 ವ್ಯಕ್ತಿಗಳ ಸರಾಸರಿಯಾಗಿರುತ್ತೀರಿ. ಒಳ್ಳೆಯ ನೀರು, ಗಾಳಿ, ಆಹಾರವನ್ನು ಸೇವಿಸಿ. ಒಳ್ಳೆಯದನ್ನು ಯೋಚಿಸಿ, ಒಳ್ಳೆಯದನ್ನು ಮಾತಾಡಿ ಮತ್ತು ಒಳ್ಳೆಯದನ್ನು ಮಾಡಿ.
೩) ಈ ಜಗತ್ತಿನಲ್ಲಿ ಯಾರು ಕೂಡ 100% ಪರಫೆಕ್ಟಾಗಿಲ್ಲ ಎಂಬುದನ್ನು ನೆನಪಲ್ಲಿಟ್ಟುಕೊಳ್ಳಿ. ನಿಮ್ಮ ದುರ್ಬಲತೆಗಳ ಬಗ್ಗೆ ಚಿಂತಿಸಿ ಕಾಲ ಹರಣ ಮಾಡುವ ಬದಲು ನಿಮ್ಮ ಶಕ್ತಿ ಸಾಮರ್ಥ್ಯಗಳ ಮೇಲೆ ಸರಿಯಾಗಿ ಫೋಕಸ್ ಮಾಡಿ.
೪) ಮೊದಲು ನಿಮ್ಮ ಒಂಟಿತನವನ್ನು ಸಾಯಿಸಿ. ಯಾವುದೇ ಕಾರಣಕ್ಕೂ ಒಂಟಿಯಾಗಿರಲು ಪ್ರಯತ್ನಿಸಬೇಡಿ. ಭಾರತ ವಿಶಾಲವಾಗಿದೆ, ಸ್ವಲ್ಪ ಹೊರಗಡೆ ಸುತ್ತಾಡಿ. ನಿಮ್ಮ ಒಂಟಿತನದೊಂದಿಗೆ ನಿಮ್ಮ ಆಲಸಿತನವನ್ನು ಸಾಯಿಸಿ. Kill your loneliness and laziness.
೫) ನಿಮ್ಮ ಮೇಲೆ ಬರುವ ಆಪಾದನೆಗಳನ್ನು, ನಿಂದನೆಗಳನ್ನು ನೆಗ್ಲೆಕ್ಟ ಮಾಡಿ. ಅವುಗಳಿಂದ ನೀವು ವಿಚಲಿತರಾಬೇಡಿ. ನೀವು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ನೀವು ಸ್ವತಂತ್ರ ಭಾರತದಲ್ಲಿರುವಿರಿ. ನಿಮ್ಮ ಸಂರಕ್ಷಣೆಗೆ ನಮ್ಮ ಬಲಿಷ್ಟ ಸಂವಿಧಾನವಿದೆ. ನಿಮ್ಮ ಕೆಲಸಗಳಿಂದ, ಸಾಧನೆಗಳಿಂದ, ಒಳ್ಳೆಯ ಕೆಲಸಗಳಿಂದ ನಿಂದಕರ ಬಾಯಿಗೆ ಬೀಗ ಜಡಿಯಿರಿ.
೬) ಮಿನಿಂಗಲೆಸ್ ಸುದ್ದಿಗಳನ್ನು, ಪ್ರಯೋಜನಕ್ಕೆ ಬಾರದ ರಾಜಕೀಯ ದ್ವೇಷಗಳನ್ನು ಬಿತ್ತರಿಸಿ ನಿಮ್ಮ ತಲೆ ಕೆಡಿಸುವ ಸ್ಟೂಪಿಡ ನ್ಯೂಸ್ ಚಾನೆಲಗಳನ್ನು, TRP ಶೋಗಳನ್ನು ನೋಡಬೇಡಿ. ಅದರ ಬದಲಾಗಿ ಒಳ್ಳೆಯ ಪುಸ್ತಕಗಳನ್ನು ಓದಿ.
೭) ಮೂರ್ಖರ ಮೂರ್ಖ ಪ್ರಶ್ನೆಗಳಿಂದ, ಪ್ರಯೋಜನಕ್ಕೆ ಬಾರದ ರಾಜಕೀಯ ಚರ್ಚೆಗಳಿಂದ ನಿಮ್ಮ ಮಾನಸಿಕ ನೆಮ್ಮದಿಯನ್ನು ಕೆಡಿಸಿಕೊಳ್ಳಬೇಡಿ. ಅಂಥವುಗಳಿಂದ ದೂರವಿರಿ.
ಇವಿಷ್ಟು ಉಪಾಯಗಳು ನೆಗೆಟಿವ್ ಆಲೋಚನೆಗಳನ್ನು ಕೊಲ್ಲುವಲ್ಲಿ ಯಶಸ್ವಿಯಾಗುತ್ತವೆ. ನೆಗೆಟಿವ್ ಆಲೋಚನೆಗಳಿಂದ ಹೊರಬಂದು ನೆಮ್ಮದಿಯಾಗಿರಿ ಮತ್ತು ಒಳ್ಳೇ ಕೆಲಸಗಳನ್ನು ಮಾಡಿ. All the Best.