1) ನಿಮ್ಮ ಮನಸ್ಸನ್ನು ತೊಂದರೆಗೊಳಗಾಗಲು ಬಿಡಬೇಡಿ. ನನ್ನಲ್ಲಿ ನಂಬಿಕೆಯಿಡಿ, ದೇವರಲ್ಲಿ ನಂಬಿಕೆಯಿಡಿ. ನಾನು ನಿಮ್ಮೊಂದಿಗೆ ಕೊನೆಯ ಕ್ಷಣದವರೆಗೂ ಇರುವೇನು ಎಂಬುದನ್ನು ಮರೆಯದಿರಿ...
2) ನಾನು ನಿಮ್ಮನ್ನು ಪ್ರೀತಿಸಿರುವೆ. ನೀವು ಸಹ ಪರಸ್ಪರ ಪ್ರೀತಿಸಲೇಬೇಕು...
3) ನಾನು ಸತ್ಯ ಹಾಗೂ ಜೀವನದ ದಾರಿಯಾಗಿರುವೆ. ನನ್ನನ್ನು ಬಿಟ್ಟು ದೇವರ ಬಳಿಗೆ ಯಾರು ಹೋಗಲಾರರು...
4) ಯಾರು ದೇವರಲ್ಲಿ ನಂಬಿಕೆ ಇಡುತ್ತಾರೋ ಅವರು ನಾಶವಾಗದೆ ಅನಂತ ಜೀವನವನ್ನು ಹೊಂದುತ್ತಾರೆ...
5) ನೀವು ನಿಮ್ಮ ನೆರೆ ಹೊರೆಯವರನ್ನು ನಿಮ್ಮಷ್ಟೇ ಪ್ರೀತಿಸಬೇಕು. ನೀವು ವ್ಯಭಿಚಾರ ಮಾಡಬಾರದು, ಕಳ್ಳತನ ಮಾಡಬಾರದು, ಕೊಲೆ ಮಾಡಬಾರದು. ಎಲ್ಲರನ್ನು ಪ್ರೀತಿಯಿಂದ ಕಾಣಬೇಕು...
6) ನನ್ನ ತಂದೆಯಾದ ದೇವರು ನನ್ನನ್ನು ಪ್ರೀತಿಸುವಷ್ಟೇ ನಾನು ನಿಮ್ಮನ್ನು ಪ್ರೀತಿಸುತ್ತಿರುವೆ...
7) ನಿಮ್ಮಲ್ಲಿ ಯಾರು ಒಂದೂ ಪಾಪ ಮಾಡಿಲ್ಲವೋ ಅವರಿಗೆ ಮೊದಲು ಕಲ್ಲು ಎಸೆಯಲಿ ಬಿಡಿ...
8) ಮಾಡಿರುವ ಪಾಪದಿಂದ ಮುಕ್ತಿ ಹೊಂದಲು ಇರುವ ಏಕೈಕ ಮಾರ್ಗವೆಂದರೆ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಮತ್ತು ಆ ಪಾಪವನ್ನು ಮತ್ತೆ ಯಾವತ್ತೂ ಮಾಡದಿರುವುದು...
9) ತಮ್ಮನ್ನು ತಾವು ಉನ್ನತಿಕರಿಸುವ ಪ್ರತಿಯೊಬ್ಬರು ವಿನಮ್ರರಾಗಿರುತ್ತಾರೆ. ವಿನಮ್ರರಾಗಿರುವವರೆಲ್ಲರು ತಮ್ಮನ್ನು ತಾವು ಉನ್ನತಿಕರಿಸಿಕೊಂಡಿರುತ್ತಾರೆ...
10) ಶ್ರೀಮಂತ ದೇವರ ರಾಜ್ಯವನ್ನು ಪ್ರವೇಶಿಸುವುದಕ್ಕಿಂತ ಒಂಟೆಯೊಂದಕ್ಕೆ ಸೂಜಿಯ ಕಣ್ಣಿನಿಂದ ಹೋಗುವುದು ಸುಲಭವಾಗಿದೆ...
11) ನಿಮ್ಮ ಶತ್ರುಗಳನ್ನು ಪ್ರೀತಿಸಿ. ನಿಮ್ಮನ್ನು ಹಿಂಸಿಸುವವರಿಗಾಗಿ ಪ್ರಾರ್ಥಿಸಿ. ನಿಮಗೆ ಕೆಟ್ಟದ್ದನ್ನು ಮಾಡಿದವರನ್ನು ಕ್ಷಮಿಸಿ. ಎಲ್ಲರನ್ನು ಪ್ರೀತಿಸಿ...
12) ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಿ. ದ್ವೇಷ ಹಾಗೂ ಕಾಮದಿಂದ ದೂರವಿರಿ...
13) ನನ್ನ ಮಾತುಗಳು ನನ್ನವಲ್ಲ, ನನ್ನನ್ನು ಕಳುಹಿಸಿದವರದ್ದು. ಅಂದರೆ ನನ್ನ ತಂದೆಯದ್ದು, ದೇವರದ್ದು. ನೀವು ನನ್ನನ್ನು ನಂಬಿದರೆ ದೇವರನ್ನು ನಂಬಿದಂತೆ. ನೀವು ನನ್ನನ್ನು ನೋಡಿದರೆ ದೇವರನ್ನು ನೋಡಿದಂತೆ...
14) ನಾಳೆಯ ಬಗ್ಗೆ ಬಹಳಷ್ಟು ಚಿಂತಿಸದಿರಿ. ನಾಳೆಯ ಚಿಂತೆಗಳನ್ನು ನಾಳೆಗೆ ಬಿಡಿ. ನಾಳೆಯ ಚಿಂತೆಗಳನ್ನು ಇವತ್ತಿಗೆ ತರಬೇಡಿ. ಇವತ್ತಿನ ಚಿಂತೆಗಳು ಇವತ್ತೇ ಮಾಯವಾಗಲಿ...
15) ನಿಮ್ಮನ್ನು ನೋಯಿಸಿದವರನ್ನು ನೀವು ಕ್ಷಮಿಸಿದರೆ ನಿಮ್ಮ ಎಲ್ಲ ತಪ್ಪುಗಳನ್ನು ದೇವರು ಕ್ಷಮಿಸುತ್ತಾನೆ...
16) ಪ್ರೀತಿಯೊಂದಿಗೆ ಬದುಕುವವರಿಗೆ ಎಲ್ಲವೂ ಸಾಧ್ಯವಾಗಿದೆ. ಪ್ರೀತಿಸುವವರಲ್ಲಿ ದೇವರಿರುತ್ತಾನೆ...
17) ಭಯಪಡಬೇಡಿ, ನನ್ನಲ್ಲಿ ನಂಬಿಕೆಯಿಡಿ...
18) ಈ ಜಗತ್ತಿನಲ್ಲಿ ಯಾರನ್ನು ಅನಾಥರಾಗಿರಲು ನಾನು ಬಿಡುವುದಿಲ್ಲ, ಅವರೊಂದಿಗೆ ನಾನಿರುತ್ತೇನೆ....