
1) ನಮ್ಮ ಜೀವನದ ಜವಾಬ್ದಾರಿ ನಮ್ಮ ಹೆಗಲ ಮೇಲೆಯೇ ಇರಬೇಕು. ಏಕೆಂದರೆ ಬೇರೆಯವರ ಹೆಗಲ ಮೇಲೆ ಬರೀ ನಮ್ಮ ಹೆಣ ಹೋಗುತ್ತದೆ...
2) ದೇಶ ಸೇವೆಯೇ ನನ್ನ ಧರ್ಮವಾಗಿದೆ...
3) ಪ್ರೇಮಿಗಳು, ಹುಚ್ಚರು ಹಾಗೂ ಕವಿಗಳು ಒಂದೇ ವಸ್ತುವಿನಿಂದ ಮಾಡಲ್ಪಟ್ಟಿರುತ್ತಾರೆ...
4) ದೇಶಭಕ್ತರನ್ನು ಹೆಚ್ಚಾಗಿ ಜನ ಹುಚ್ಚರೆನ್ನುತ್ತಾರೆ...
5) ಸೂರ್ಯ ವಿಶ್ವದ ಎಲ್ಲ ದೇಶಗಳನ್ನು ನೋಡುತ್ತಾನೆ. ಆದರೆ ಭಾರತದಂಥ ಸ್ವತಂತ್ರ, ಸುಶೀಲ, ಸುಂದರ, ಸಂತೋಷಕರ ದೇಶವನ್ನು ಸೂರ್ಯ ನೋಡಿರಲು ಸಾಧ್ಯವೇ ಇಲ್ಲ...
6) ನಾನೊಬ್ಬ ಇಂಥ ಹುಚ್ಚನೆಂದರೆ ನಾನು ಜೈಲಿನಲ್ಲೂ ಸ್ವತಂತ್ರನಾಗಿರುವೆ...
7) ಯಾವುದೇ ವ್ಯಕ್ತಿಯನ್ನು ಸಾಯಿಸುವುದು ಸುಲಭವಾಗಿದೆ, ಆದರೆ ಅವನ ವಿಚಾರಗಳನ್ನು ಸಾಯಿಸುವುದು ಅಷ್ಟು ಸುಲಭವಲ್ಲ. ದೊಡ್ಡ ಸಾಮ್ರಾಜ್ಯಗಳೇ ಮಣ್ಣಾಗುತ್ತವೆ, ಆದರೆ ವಿಚಾರಗಳು ಸದಾ ಜೀವಂತವಾಗಿರುತ್ತವೆ...
8) ನನಗೂ ಆಸೆ, ಆಕಾಂಕ್ಷೆ ಹಾಗೂ ಜೀವನದ ಕಡೆಗೆ ಆಕರ್ಷಣೆಗಳಿವೆ. ಆದರೆ ಅವಶ್ಯಕತೆ ಬಿದ್ದರೆ ನಾನವುಗಳನ್ನು ತ್ಯಾಗ ಮಾಡಲು ಸಿದ್ಧನಾಗಿರುವೆ. ಇದೇ ನಿಜವಾದ ಬಲಿದಾನವಾಗಿದೆ...
9) ಜನರನ್ನು ತುಳಿದು ಅವರ ಆಲೋಚನೆಗಳನ್ನು, ವಿಚಾರಗಳನ್ನು ಸಾಯಿಸಲು ಸಾಧ್ಯವಿಲ್ಲ...
10) ಕಾನೂನಿನ ಪಾವಿತ್ಯ್ರತೆಯೂ ಅದು ಜನರ ಇಚ್ಛೆಯನ್ನು ಅಭಿವ್ಯಕ್ತಿಸುವ ತನಕ ಮಾತ್ರ ಇರುತ್ತದೆ...
11) ಕ್ರಾಂತಿ ಮನುಕುಲದ ಅನಿವಾರ್ಯ ಅಧಿಕಾರವಾಗಿದೆ. ಸ್ವಾತಂತ್ರ್ಯ ಎಲ್ಲರ ಜನ್ಮಸಿದ್ಧ ಹಕ್ಕಾಗಿದೆ. ಶ್ರಮವೇ ಸಮಾಜದ ನಿಜವಾದ ನಿರ್ವಾಹಕವಾಗಿದೆ...
12) ನಿರ್ದಯ ವಿಶರ್ಮೆ ಹಾಗೂ ಸ್ವತಂತ್ರ ಚಿಂತನೆ ಕ್ರಾಂತಿಕಾರಿ ಯೋಚನೆಯ ಎರಡು ಮುಖ್ಯ ಲಕ್ಷಣಗಳಾಗಿವೆ...
13) ನಾನೊಬ್ಬ ಮನುಷ್ಯನಾಗಿರುವೆ, ಮನುಷತ್ವದ ಮೇಲೆ ಪ್ರಭಾವ ಬೀರುವ ಎಲ್ಲದರ ಬಗ್ಗೆ ನಾನು ಕಾಳಜಿ ವಹಿಸುತ್ತೇನೆ...
14) ನನ್ನ ಪೆನ್ ನನ್ನ ಭಾವನೆಗಳೊಂದಿಗೆ ಚಿರಪರಿಚಿತವಾಗಿದೆ. ನಾನು ಇಷ್ಕ (ಪ್ರೇಮ) ಬರೆಯ ಬಯಸಿದರೆ ಅದು ಇಂಕಾಲಾಬ (ಕ್ರಾಂತಿ) ಎಂದು ಬರೆಯುತ್ತದೆ...
15) ಪ್ರಯತ್ನಿಸುವುದು ಮನುಷ್ಯನ ಕರ್ತವ್ಯವಾಗಿದೆ, ಯಶಸ್ಸು ಅವಕಾಶ ಹಾಗೂ ಪರಿಸರದ ಮೇಲೆ ನಿರ್ಧಾರಿತವಾಗುತ್ತದೆ...
16) ಪ್ರೀತಿ ಯಾವಾಗಲೂ ಮನುಷ್ಯನ ಪಾತ್ರವನ್ನು ಹೆಚ್ಚಿಸುತ್ತದೆ. ಪ್ರೀತಿ ಪ್ರೀತಿಯಾಗಿದ್ದರೆ ಅದು ಯಾವತ್ತೂ ಮನುಷ್ಯನನ್ನು ಕುಗ್ಗಿಸುವುದಿಲ್ಲ...
17) ಫಿಲಾಸಫಿ ಮಾನವ ದೌರ್ಬಲ್ಯದ ಅಥವಾ ಜ್ಞಾನದ ಕೊರತೆಯ ಫಲಿತಾಂಶವಾಗಿದೆ...
18) ಕ್ರಾಂತಿಯ ಖಡ್ಗವು ವಿಚಾರಗಳ ಘೋರ ಕಲ್ಲಿನ ಮೇಲೆ ಹರಿತಗೊಂಡಿದೆ...
19) ನನ್ನ ಕ್ರಾಂತಿಯು ಅನಿವಾರ್ಯವಾಗಿ ಕಲಹವನ್ನು ಒಳಗೊಂಡಿರಲಿಲ್ಲ. ಅದು ಬಾಂಬ್ ಮತ್ತು ಪಿಸ್ತೂಲಗಳ ಆರಾಧನೆಯಾಗಿರಲಿಲ್ಲ...
20) ರಾಜನ ವಿರುದ್ಧದ ದಂಗೆ ಯಾವಾಗಲೂ ಎಲ್ಲ ಧರ್ಮಗಳ ಅನುಸಾರ ಪಾಪವಾಗಿದೆ. ಅದಕ್ಕೆ ನಾನು ಆ ದೇವರ ಅಸ್ತಿತ್ವವನ್ನು ನಂಬುವುದಿಲ್ಲ...
21) ದಂಗೆ ಒಂದು ಕ್ರಾಂತಿಯಲ್ಲ. ಅದು ಕೊನೆಗೆ ಎಲ್ಲರ ಅಂತ್ಯಕ್ಕೆ ಕಾರಣವಾಗಬಹುದು...
22) ನಾನು ಸಂತೋಷದಿಂದ ಗಲ್ಲು ಹತ್ತುತ್ತೇನೆ ಮತ್ತು ಕ್ರಾಂತಿಕಾರಿಗಳು ಎಷ್ಟು ಧೈರ್ಯದಿಂದ ತಮ್ಮನ್ನು ತಾವು ತ್ಯಾಗ ಮಾಡಬಹುದೆಂದು ಜಗತ್ತಿಗೆ ತೋರಿಸುತ್ತೇನೆ...
23) ಇದು ಮದುವೆಯಾಗುವ ಸಮಯವಲ್ಲ. ನನ್ನ ದೇಶ ನನ್ನನ್ನು ಕರೆಯುತ್ತಿದೆ. ನನ್ನ ಹೃದಯ ಮತ್ತು ಆತ್ಮದಿಂದ ದೇಶಕ್ಕೆ ಸೇವೆ ಸಲ್ಲಿಸುವ ಪ್ರತಿಜ್ಞೆ ಮಾಡಿದ್ದೇನೆ...
24) ಅವರು ನನ್ನನ್ನು ಸಾಯಿಸಬಹುದು, ಆದರೆ ಅವರಿಗೆ ನನ್ನ ಆಲೋಚನೆಗಳನ್ನು ಸಾಯಿಸಲು ಸಾಧ್ಯವಿಲ್ಲ. ಅವರು ನನ್ನ ದೇಹವನ್ನು ಪುಡಿಪುಡಿ ಮಾಡಬಹುದು, ಆದರೆ ಅವರಿಗೆ ನನ್ನ ಆತ್ಮವನ್ನು ಪುಡಿ ಮಾಡಲು ಸಾಧ್ಯವಿಲ್ಲ...
25) ಕಿವುಡರಿಗೆ ಕೇಳಿಸಬೇಕೆಂದರೆ ಜೋರಾಗಿ ಕೂಗಿ ಹೇಳಬೇಕು...
26) ಬಾಂಬು ಹಾಗೂ ಪಿಸ್ತೂಲುಗಳಿಂದ ಕ್ರಾಂತಿಯಾಗುವುದಿಲ್ಲ. ಕ್ರಾಂತಿಯ ಖಡ್ಗ ವಿಚಾರಗಳ ಕಲ್ಲಿನ ಮೇಲೆ ಹರಿತಗೊಳ್ಳುತ್ತದೆ...