200+ ಕನ್ನಡ ವಚನಗಳು - Kannada Vachanagalu - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

200+ ಕನ್ನಡ ವಚನಗಳು - Kannada Vachanagalu

ಕನ್ನಡ ವಚನಗಳು - Kannada Vachanagalu

ವಚನಗಳು - Vachanagalu


 1) ಬಸವಣ್ಣನ ವಚನಗಳು : Basavanna Vachanagalu in Kannada

ಬಸವಣ್ಣನ ವಚನಗಳು : Basavanna Vachanagalu                           

1) ಇವನಾರವ, ಇವನಾರವ ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಯ್ಯ ನಿಮ್ಮ ಮನೆಯ ಮಗನೆಂದೆನಿಸಯ್ಯ... 

Basavanna Vachanagalu

2) ನೀನೊಲಿದರೆ ಕೊರಡು ಕೊನರುವುದಯ್ಯ

ನೀನೊಲಿದರೆ ಬರಡು ಹಯನಹುದಯ್ಯ

ನೀನೊಲಿದರೆ ವಿಷವಮೃತವಹುದಯ್ಯ

ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿರ್ಪವು ಕೂಡಲಸಂಗಮದೇವ... 

Basavanna Vachanagalu

3) ಭಕ್ತಿ ಇಲ್ಲದ ಬಡವ ನಾನಯ್ಯಾ 

ಕಕ್ಕಯ್ಯನ ಮನೆಯಲ್ಲೂ ಬೇಡಿದೆ,

ಚೆನ್ನಯ್ಯನ ಮನೆಯಲ್ಲೂ ಬೇಡಿದೆ

ದಾಸಯ್ಯನ ಮನೆಯಲ್ಲೂ ಬೇಡಿದೆ

ಎಲ್ಲ‌ ಪುರಾತನರು ನೆರೆದು ಭಕ್ತಿ ಬಿಕ್ಷವನಿಕ್ಕಿದಡೆ ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವ... 

Basavanna Vachanagalu

4) ಮಡಕೆಯ ಮಾಡುವಡೆ ಮಣ್ಣೆ ಮೊದಲು

ತೊಡಿಕೆಯ ಮಾಡುವಡೆ ಹೊನ್ನೇ ಮೊದಲು

ಶಿವಪಥವನರಿವಡೆ ಗುರುಪಥವೇ ಮೊದಲು 

ಕೂಡಲಸಂಗಮದೇವನರಿವಡೆ ಶರಣರ ಸಂಗವೇ ಮೊದಲು...‌

Basavanna Vachanagalu

5) ನೀರಿಂಗೆ ನೈದಿಲೇ ಶೃಂಗಾರ 

ಊರಿಂಗೆ ಆರವೆಯೇ ಶೃಂಗಾರ 

ನಾರಿಗೆ ಗುಣವೇ ಶೃಂಗಾರ 

ಗಗನಕ್ಕೆ ಚಂದ್ರಮನೇ ಶೃಂಗಾರ 

ನಮ್ಮ ಕೂಡಲಸಂಗನ ಶರಣಗೆ ನೊಸಲ ಶ್ರೀ ವಿಭೂತಿಯೇ ಶೃಂಗಾರ... 

Basavanna Vachanagalu

6) ಹುತ್ತವ ಬಡಿದರೆ ಉರಗ ಸಾವುದೆ?

ಘೋರತಪವ ಮಾಡಿದರೇನು 

ಅಂತರಂಗ ಆತ್ಮಶುದ್ಧಿಯಿಲ್ಲದವರನೆಂತು ನಂಬುವನಯ್ಯಾ ಕೂಡಲಸಂಗಮದೇವ?

Basavanna Vachanagalu

7) ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ

ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ

ಕೂಟಕ್ಕೆ ಸ್ರ್ತೀಯಾಗಿ ಕೂಡಿದಳು ಮಾಯೆ

ಇದಾವ ಪರಿಯಲ್ಲಿ ಕಾಡಿತ್ತು ಮಾಯೆ.

ಈ ಮಾಯೆಯ ಕಳೆವಡೆ ಎನ್ನಳವಲ್ಲ ನೀವೇ ಬಲ್ಲಿರಿ ಕೂಡಲಸಂಗಮದೇವ... 

Basavanna Vachanagalu

8) ಒಲೆ ಹೊತ್ತಿ ಉರಿದರೆ ನಿಲಬಹುದಲ್ಲದೆ ಧರೆ ಹೊತ್ತಿ ಉರಿದರೆ ನಿಲಬಹುದೆ?

ಏರಿ ನೀರುಂಬಡೆ, ಬೇಲಿ ಹೊಲವ ಮೇವೊಡೆ, 

ನಾರಿ ತನ್ನ ಮನೆಯಲ್ಲಿ ಕಳುವೊಡೆ, 

ತಾಯ ಮೊಲೆವಾಲು ನಂಜಾಗಿ ಕೊಲುವೊಡೆ 

ಇನ್ನಾರಿಗೆ ದೂರವೆನಯ್ಯಾ ಕೂಡಲಸಂಗಮದೇವ?

Basavanna Vachanagalu

9) ಬೆಳೆವ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ 

ತಿಳಿಯಲೀಯದು ಎಚ್ಚರಲೀಯದು.

ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ ಲಿಂಗ ತಂದೆ, 

ಸುಳಿದೆಗೆದು ಬೆಳೆವೆನು ಕೂಡಲಸಂಗಮದೇವ...‌

Basavanna Vachanagalu

10) ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೋ,

ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ. 

ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೋ,

ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ. 

ಮನೆಯೊಳಗೆ ಮನೆಯೊಡೆಯನಿಲ್ಲ ಕೂಡಲಸಂಗಮದೇವ... 

Basavanna Vachanagalu

11) ಗಂಡನ ಮೇಲೆ‌ ಸ್ನೇಹವಿಲ್ಲದ ಹೆಂಡತಿ,

ಲಿಂಗದ ಮೇಲೆ ನಿಷ್ಟೆಯಿಲ್ಲದ‌ ಭಕ್ತ 

‌ಇದ್ದಡೇನೋ, ಶಿವ ಶಿವಾ ಹೋದಡೇನೋ? 

ಕೂಡಲ ಸಂಗಮದೇವನ ಊಡವ ಆವಿಂಗೆ ಉಣ್ಣದ ಕರುವ ಬಿಟ್ಟಂತೆ... 

Basavanna Vachanagalu

12) ಲೋಕದ ಡೊಂಕ ನೀವೇಕೆ ತಿದ್ದುವಿರಿ? 

ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ

ನಿಮ್ಮ ನಿಮ್ಮ‌‌ ಮನವ ಸಂತೈಸಿಕೊಳ್ಳಿ

ನೆರೆಮನೆಯ ದು:ಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ... 

Basavanna Vachanagalu

13) ಹಬ್ಬಕ್ಕೆ ತಂದ ಹರಕೆಯ ಕುರಿ

ತೋರಣಕ್ಕೆ ತಂದ ತಳಿರ ಮೇಯಿತು

ಕೊಂದಹರೆಂಬುದನರಿಯದೆ ಬೆಂದ 

ಒಡಲ ಹೊರೆಯ ಹೋಯಿತು ಅಂದದೆ ಹೊಂದಿತು 

ಕೊಂದವರುಳಿದರೆ ಕೂಡಲಸಂಗಮದೇವ?

Basavanna Vachanagalu

14) ಹಾವು ತಿಂದವರ ನುಡಿಸಬಹುದು

ಗರ ಹೊಡೆದವರ ನುಡಿಸಬಹುದು

ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯ 

ಬಡತನವೆಂಬ ಮಂತ್ರವಾದಿ ಹೊಗಲು ಒಡನೆ ನುಡಿವರಯ್ಯಾ ಕೂಡಲಸಂಗಮದೇವ... 

Basavanna Vachanagalu

15) ಸಾರ ಸಜ್ಜನರ ಸಂಗ ಲೇಸು ಕಂಡಯ್ಯಾ

ದೂರ ದುರ್ಜನರ ಸಂಗ ಭಂಗವಯ್ಯಾ

ಸಂಗವೆರಡುಂಟು ಒಂದ ಹಿಡಿ, ಒಂದ ಬಿಡು

ಮಂಗಳಮೂರ್ತಿ ನಮ್ಮ ಕೂಡಲಸಂಗಮದೇವನ ಶರಣರ... 

Basavanna Vachanagalu

16) ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ

ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ

ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ ಕೂಡಲಸಂಗಮದೇವ... 

Basavanna Vachanagalu

17) ನಾದಪ್ರಿಯ ಶಿವನೆಂಬರು ನಾದಪ್ರಿಯ ಶಿವನಲ್ಲಯ್ಯಾ

ವೇದಪ್ರಿಯ ಶಿವನೆಂಬರು ವೇದಪ್ರಿಯ ಶಿವನಲ್ಲಯ್ಯಾ

ನಾದವ ಮಾಡಿದ ರಾವಣಂಗೆ ಅರೆ ಆಯುಷ್ಯವಾಯಿತು

ವೇದವನೊದಿದ ಬ್ರಹ್ಮನ ಶಿರ ಹೋಯಿತು

ನಾದಪ್ರಿಯನೂ ಅಲ್ಲ ವೇದಪ್ರಿಯನೂ ಅಲ್ಲ 

ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ... 

Basavanna Vachanagalu

18) ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ

ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ

ಮಾಡುವ ನೀಡುವ ನಿಜಗುಣವುಳ್ಳಡೆ ಕೂಡಿಕೊಂಬ ನಮ್ಮ ಕೂಡಲಸಂಗಮದೇವ...‌

Basavanna Vachanagalu

19) ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ 

ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ

ತನ್ನ ಬನ್ನಿಸಬೇಡ ಇದಿರ ಹಳಿಯಲು ಬೇಡ 

ಇದೆ ಅಂತರಂಗ ಶುದ್ಧಿ ಇದೆ ಬಹಿರಂಗ ‌ಶುದ್ಧಿ

ಇದೆ ನಮ್ಮ ಕೂಡಲಸಂಗಮದೇವನೊಲಿಸುವ ಪರಿ... 

Basavanna Vachanagalu

20) ಕಂಡ ಭಕ್ತರಿಗೆ ಕೈಮುಗಿವಾತನೆ ಭಕ್ತ

ಮೃದು ವಚನ ಸಕಲ ಜಪಂಗಳಯ್ಯಾ 

ಮೃದು ವಚನ ಸಕಲ ತಪಂಗಳಯ್ಯಾ

ಸದುವಿನಯವೇ ಸದಾಶಿವನ ಒಲುಮೆಯಯ್ಯಾ

ಕೂಡಲಸಂಗಮದೇವನಂತಲ್ಲನಯ್ಯಾ... 

Basavanna Vachanagalu

21) ದಯವಿಲ್ಲದ ಧರ್ಮವದೇವುದಯ್ಯಾ

ದಯವೇ ಬೇಕು ಸಕಲ‌ ಪ್ರಾಣಿಗಳೆಲ್ಲರಲ್ಲಿಯೂ 

ದಯವೇ ಧರ್ಮದ ಮೂಲವಯ್ಯಾ 

ಕೂಡಲಸಂಗಮದೇವನಂತಲ್ಲನಯ್ಯಾ... 

Basavanna Vachanagalu

22) ಎನಗಿಂತ ಕಿರಿಯರಿಲ್ಲ 

ಶಿವಭಕ್ತರಿಗಿಂತ ಹಿರಿಯರಿಲ್ಲ

ನಿಮ್ಮ ಪಾದಸಾಕ್ಷಿ ಎನ್ನ ಮನಸಾಕ್ಷಿ 

ಕೂಡಲಸಂಗಮದೇವ ಎನಗಿದೆ ದಿವ್ಯ... 

Basavanna Vachanagalu

23) ಬ್ರಹ್ಮಪದವಿಯನೊಲ್ಲೇ 

ವಿಷ್ಣುಪದವಿಯನೊಲ್ಲೆ 

ರುದ್ರಪದವಿಯನೊಲ್ಲೇ 

ನಾನು ಮತ್ತಾವಪದವಿಯನೊಲ್ಲೆನಯ್ಯಾ 

ಕೂಡಲಸಂಗಮದೇವ ನಿಮ್ಮ ಸದ್ಭಕ್ತರ ಪಾದವನರಿದಿಪ್ಪ ಮಹಾಪದವಿಯ ಕರುಣಿಸಯ್ಯಾ... 

Basavanna Vachanagalu

24) ಚಕೋರಂಗೆ ಚಂದ್ರಮನಾ ಬೆಳಗಿನಾ ಚಿಂತೆ 

ಅಂಬುಜಕೆ ಬಾನುವಿನ ಉದಯದಾ ಚಿಂತೆ

ಭ್ರಮರಂಗೆ ಪರಿಮಳದಾ ಬಂಡುಂಬ‌‌ ಚಿಂತೆ 

ಎನಗೆ ನಮ್ಮ ಕೂಡಲಸಂಗಮದೇವರ ನೆನೆವ ಚಿಂತೆ... 

Basavanna Vachanagalu

25) ಸೂರ್ಯನ ಉದಯ ತಾವರೆಗೆ ಜೀವಾಳ 

ಚಂದ್ರಮನುದಯ ನೈದಿಲೆಗೆ ಜೀವಾಳ 

ಕೂಪರ ಠಾವಿನಲ್ಲಿ ಕೂಟ ಜೀವಾಳ

ಒಲಿದ ಠಾವಿನಲ್ಲಿ ನೊಟ ಜೀವಾಳವಯ್ಯಾ 

ಕೂಡಲಸಂಗಮದೇವನ ಶರಣರ ಬರವೆನೆಗೆ ಪ್ರಾಣ ಜೀವಾಳವಯ್ಯಾ...‌

Basavanna Vachanagalu

26) ಕಾಗೆ ಒಂದಗುಳ ಕಂಡರೆ ಕೂಗಿ ಕರೆಯದೆ ತನ್ನ ಬಳಗವನು?

ಕೋಳಿಯೊಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವೆಲ್ಲವನು?

ಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದೊಡೆ ಕಾಗೆ ಕೋಳಿಯಿಂದ ಕರಕಷ್ಟ ಕೂಡಲಸಂಗಮದೇವ? 

Basavanna Vachanagalu

27) ತಂದೆ ನೀನು ತಾಯಿ ನೀನು 

ಬಂಧು ನೀನು ಬಳಗ ನೀನು

ನೀನಲ್ಲದೆ ಮತ್ತಾರೂ ಇಲ್ಲವಯ್ಯ

ಕೂಡಲಸಂಗಮದೇವ‌‌‌...‌

Basavanna Vachanagalu

28) ವಚನದಲ್ಲಿ ನಾಮಾಮೃತ ತುಂಬಿ 

ನಯನದಲ್ಲಿ ನಿಮ್ಮ ಮೂರುತಿ ತುಂಬಿ

ಕಿವಿಯಲ್ಲಿ ನಿಮ್ಮ ಕಿರುತಿ ತುಂಬಿ

ಮನದಲ್ಲಿ ನಿಮ್ಮ ನೆನವು ತುಂಬಿ ಕೂಡಲಸಂಗಮದೇವ 

ನಿಮ್ಮ ‌ಚರಣ ಕಮಲದೊಳಗಾನು ತುಂಬಿ... 

Basavanna Vachanagalu

29) ಭಕ್ತಿಯೆಂಬ ಪೃಥ್ವಿಯ ಮೇಲೆ 

ಗುರುಯೆಂಬ ಬೀಜವಂಕುರುಸಿ 

ಲಿಂಗವೆಂಬ ಎಲೆಯಾಯಿತು.

ಲಿಂಗವೆಂಬ ಎಲೆಯ ಮೇಲೆ 

ವಿಚಾರವೆಂಬ ಹೂವಾಯಿತು

ಆಚಾರವೆಂಬ ಕಾಯಾಯಿತು

ನಿಷ್ಪತ್ತಿಯೆಂಬ ಹಣ್ಣಾಯಿತು.

ನಿಷ್ಪತ್ತಿಯೆಂಬ ಹಣ್ಣು‌ ತೊಟ್ಟುಬಿಟ್ಟು ಕಳಚಿ ಬೀಳುವಲ್ಲಿ ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ... 

Basavanna Vachanagalu

30) ಇಬ್ಬರು ಮೂವರು ದೇವರೆಂದು ಉಬ್ಬಿ ಮಾತನಾಡಬೇಡ 

ಒಬ್ಬನೆ ಕಾಣಿರೋ ಇಬ್ಬರೆಂಬುದು ಹುಸಿನೋಡಾ 

ಕೂಡಲಸಂಗಮದೇವನಲ್ಲದೆ ಇಲ್ಲವೆಂದಿತು ವೇದ... 

Basavanna Vachanagalu

31)  ನೀರ ಕಂಡಲ್ಲಿ ಮುಳುಗುವರಯ್ಯಾ

ಮರವ ಕಂಡಲ್ಲಿ ಸುತ್ತುವರಯ್ಯಾ

ಬತ್ತುವ ಜಲವ ಒಣಗುವ ಮರವ ಮೆಚ್ಚಿದವರು ನಿಮ್ಮ ನೆತ್ತ ಬಲ್ಲರಯ್ಯಾ ಕೂಡಲಸಂಗಮದೇವಾ...‌

Basavanna Vachanagalu

32) ಕೊಲುವವನೆ ಮಾದಿಗ 

ಹೊಲಸು ತಿಂಬುವವನೆ ಹೊಲೆಯ 

ಕುಲವೇನು ಆವಂದಿರ ಕುಲವೇನು

ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವ ನಮ್ಮ‌ ಕೂಡಲಸಂಗಮದೇವನ ಶರಣರೆ ಕುಲಜರು... 

Basavanna Vachanagalu

33) ದೇವನೊಬ್ಬ ನಾಮ ಹಲವು

ಪರಮ ಪತಿವ್ರತೆಗೆ ಗಂಡನೊಬ್ಬ

ಮತ್ತೊಂದಕ್ಕೆರಗಿದಡೆ ಕಿವಿ ಮೂಗು ಕೊಯ್ಯುವನು

ಹಲವು ದೈವದ ಎಂಜಲ ತಿಂಬವರನೆಂಬೆ ಕೂಡಲಸಂಗಮದೇವ... 

Basavanna Vachanagalu

34) ನೂರನೋದಿ ನೂರ ಕೇಳಿದಡೇನು?

ಆಸೆ ಹರಿಯದು, ರೋಷ ಬಿಡದು.

ಮಜ್ಜನಕ್ಕೆರೆದು ಫಲವೇನು?

ಮಾತಿನಂತೆ ಮನವಿಲ್ಲದ ಜಾತಿ ಡೊಂಬರ ನೋಡಿ 

ನಗುವ ನಮ್ಮ ಕೂಡಲಸಂಗಮದೇವ... 

Basavanna Vachanagalu

35) ನುಡಿದರೆ ಮುತ್ತಿನ ಹಾರದಂತಿರಬೇಕು,

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು

ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು

ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು

ನುಡಿಯೊಳಗಾಗಿ ನಡೆಯದಿದ್ದಡೆ 

ಕೂಡಲಸಂಗಮದೇವನೆಂತೊಲಿವನಯ್ಯಾ?

Basavanna Vachanagalu

36) ಉಳ್ಳವರು ಶಿವಾಲಯ ಮಾಡುವರು

ನಾನೇನು ಮಾಡಲಿ ಬಡವನಯ್ಯಾ?

ಎನ್ನ ಕಾಲೆ ಕಂಭ, ದೇಹವೆ ದೇಗುಲ

 ಶಿರವೆ ಹೊನ್ನ ಕಲಶವಯ್ಯಾ

ಕೂಡಲಸಂಗಮದೇವಾ ಕೇಳಯ್ಯಾ

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ... 

Basavanna Vachanagalu

37) ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ

ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ

ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ

ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ 

ಕೂಡಲಸಂಗಮದೇವನ ಶರಣರ ಅನುಭಾವದಿಂದ ಎನ್ನ ಭವದ ಕೇಡು ನೋಡಯ್ಯಾ... 

Basavanna Vachanagalu

38) ಕಂಗಳ ತುಂಬಿದ ಬಳಿಕ ನೋಡಲಿಲ್ಲ

ಕಿವಿಗಳು ತುಂಬಿದ ಬಳಿಕ‌ ಕೇಳಲಿಲ್ಲ

ಕೈಗಳು ತುಂಬಿದ ಬಳಿಕ‌ ಪೂಜಿಸಲಿಲ್ಲ

ಮನ ತುಂಬಿದ ಬಳಿಕ ನೆನೆಯಲಿಲ್ಲ

ಮಹಾಂತ ಕೂಡಲಸಂಗಮದೇವನ... 

Basavanna Vachanagalu

39) ಹಾಡಿದಡೆ ಎನ್ನೊಡೆಯನ ಹಾಡುವೆ

ಬೇಡಿದಡೆ ಎನ್ನೊಡೆಯನ ಬೇಡುವೆ 

ಒಡೆಯಂಗೊಡಲ ತೋರಿ ಎನ್ನ ಬಡತನವ ಬಿನೈಸುವೆ.

ಒಡೆಯ ಮಹಾದಾನಿ ಕೂಡಲಸಂಗಮದೇವಂಗೆ ಸೆರೆಗೊಡ್ಡಿ ಬೇಡುವೆ‌‌‌... 

Basavanna Vachanagalu

40) ನಂಬರು ನಚ್ಚರು ಬರಿದೆ ಕರೆವರು

ನಂಬಲರಿಯರೀ ಲೋಕದ ಮನುಜರು

ನಂಬಿ ಕರೆದಡೆ ಓ ಎನ್ನನೆ ಶಿವನು?

ನಂಬದೆ ನಚ್ಚದೆ ಬರಿದೆ ಕರೆವರ ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ... 

Basavanna Vachanagalu

41) ಬಚ್ಚಲ ನೀರು ತಿಳಿಯಾದಡೇನು?

ಸಲ್ಲದ ಹೊನ್ನು ಮತ್ತೆಲ್ಲಿದ್ದಡೇನು?

ಆಕಾಶದ ಮಾವಿನ ಫಲವೆಂದಡೇನು?

ಕೊಯ್ಯಲಿಲ್ಲ ಮೆಲ್ಲಲಿಲ್ಲ

ಕೂಡಲಸಂಗಮದೇವನ ಶರಣರ ಅನುಭಾವವಿಲ್ಲದವರು ಎಲ್ಲಿದ್ದಡೇನು ಎಂತಾದಡೇನು? 

Basavanna Vachanagalu

42) ಒಲವಿಲ್ಲದ ಪೂಜೆ ನೇಹವಿಲ್ಲದ ಮಾಟ

ಆ ಪೂಜೆಯು ಆ ಮಾಟವು ಚಿತ್ರದ ರೂಹು ಕಾಣಿರಣ್ಣಾ 

ಚಿತ್ರದ ಕಬ್ಬು ಕಾಣಿರಣ್ಣಾ 

ಅಪ್ಪಿದಡೆ ಸುಖವಿಲ್ಲ ಮೆಲಿದಡೆ ರುಚಿಯಿಲ್ಲ 

ಕೂಡಲಸಂಗಮದೇವ ನಿಜವಲ್ಲದವನ ಭಕ್ತಿ... 

Basavanna Vachanagalu

43) ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ

ನಾಯಿಯ ಹಾಲು ನಾಯಿಮರಿಗಲ್ಲದೆ ಮಾಡುವ ಅರ್ಥ ವ್ಯರ್ಥ ಕಂಡಯ್ಯಾ ಕೂಡಲಸಂಗಮದೇವ... 

Basavanna Vachanagalu

44) ದೇವಲೋಕ ಮೃತ್ಯು ಲೋಕವೆಂಬುದು ಬೇರಿಲ್ಲ ಕಾಣಿರೋ

ಸತ್ಯವ ನುಡಿಯುವುದೆ ದೇವಲೋಕ

ಮಿತ್ಯವ ನುಡಿಯುವುದೆ ಮೃತ್ಯು ಲೋಕ

ಆಚಾರವೇ ಸ್ವರ್ಗ ಅನಾಚಾರವೆ ನರಕ

ಕೂಡಲಸಂಗಮದೇವಾ ನೀವೇ ಪ್ರಮಾಣು... 

Basavanna Vachanagalu

45) ಜಗದಗಲ ಮುಗಿಲಗಲ ಮಿಗೆಯಗಲ

 ನಿಮ್ಮಗಲ ಪಾತಾಳದಿಂದತ್ತ ನಿಮ್ಮ ಶ್ರೀಚರಣ.

ಬ್ರಹ್ಮಾಂಡದಿಂದೆತ್ತ ನಿಮ್ಮ ಶ್ರೀಮುಕುಟ

ಅಪ್ರಮಾಣ ಅಗಮ್ಯ ಅಗೋಚರ ಅಪ್ರತಿಮ‌ 

ಲಿಂಗವೆ ಕೂಡಲಸಂಗಮದೇವ‌ ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ....

Basavanna Vachanagalu

2) ಅಲ್ಲಮಪ್ರಭು ವಚನಗಳು - Allama Prabhu Vachanagalu in Kannada

ಅಲ್ಲಮಪ್ರಭು ವಚನಗಳು - Allama Prabhu Vachanagalu in Kannada

1) ಅಜ್ಞಾನವೆಂಬ ತೊಟ್ಟಿಲೊಳಗೆ 

ಜ್ಞಾನವೆಂಬ ಶಿಶುವ ಮಲಗಿಸಿ

ಸಕಲ ವೇದಶಾಸ್ತ್ರವೆಂಬ ನೇಣುಕಟ್ಟಿ

ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ

ಭ್ರಾಂತಿ ಎಂಬ ತಾಯಿ.

ತೊಟ್ಟಿಲು ಮುರಿದು, ನೇಣು ಹರಿದು

ಜೋಗುಳ ನಿಂದಲ್ಲದೇ ಗುಹೇಶ್ವರನೆಂಬ ಲಿಂಗವ ಕಾಣಬಾರದು... 

Allama Prabhu Vachanagalu in Kannada

2) ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ

ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯೆಲ್ಲ

ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ

ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರಾ... 

Allama Prabhu Vachanagalu in Kannada

3) ಕಾಲಿಲ್ಲದ ಗಮನ, ಕೈಯಿಲ್ಲದ ಸೋಂಕು

ಬಾಯಿಯಿಲ್ಲದೆ ರುಚಿ ಭಾವನೇ ಖರ್ಪರವಾಗಿ

ಪರಮದೇಹಿ ಎಂದು ಬೇಡುವ ಪರಮನ ತೋರಯ್ಯಾ ಗುಹೇಶ್ವರಾ...‌

Allama Prabhu Vachanagalu in Kannada

4)  ಪೃಥ್ವಿಯನೆಲೆಗಳೆದ ಸ್ಥಾವರಂಗಳಿಲ್ಲ

ಅಪ್ಪುವನಲೆಗಳೆದ ತೀರ್ಥಯಾತ್ರೆಗಳಿಲ್ಲ

ಅಗ್ನಿಯನಲೆಗಳೆದ ಹೋಮಸಮಾಧಿಗಳಿಲ್ಲ

ವಾಯುವಿನಲೆಗಳೆದ ನೇಮ‌ ನಿತ್ಯಂಗಳಿಲ್ಲ

ಆಕಾಶವನಲೆಗಳೆದ ಧ್ಯಾನ ಮಾನಂಗಳಿಲ್ಲ

ಗುಹೇಶ್ವರ ನೆಂದರಿದಾಗ ಇನ್ನಾವಂಗವೂ ಇಲ್ಲ. 

Allama Prabhu Vachanagalu in Kannada

5) ಕಲ್ಲಮನೆಯ ಮಾಡಿ, ಕಲ್ಲದೇವರ ಮಾಡಿ,

ಆ ಕಲ್ಲು ಕಲ್ಲಮೇಲೆ ಕಡೆದರೆ ದೇವರೆತ್ತ ಹೋದರೋ?

ಲಿಂಗ ಪ್ರತಿಷ್ಟೆಯ ಮಾಡಿದವರಿಗೆ 

ನಾಯಕ ನರಕ ಗುಹೇಶ್ವರಾ... 

Allama Prabhu Vachanagalu in Kannada

6) ಹಗಲನಿರುಳ ಮಾಡಿ, ಇರುಳ ಹಗಲಮಾಡಿ,

ಆಚಾರವ ಅನಾಚಾರವ ಮಾಡಿ, ಅನಾಚಾರವ ಆಚಾರವಮಾಡಿ,

ಭಕ್ತನ ಭವಿಯ ಮಾಡಿ, ಭವಿಯಭಕ್ತನ ಮಾಡಿ,

ನುಡಿವವನ ಮಾತ ಕೇಳಲಾಗದು ಗುಹೇಶ್ವರಾ... 

Allama Prabhu Vachanagalu in Kannada

7) ಅಗ್ನಿಗೆ ತಂಪುಂಟೇ? ವಿಷಯಕ್ಕೆ ರುಚಿಯುಂಟೇ? 

ಕಂಗಳಿಗೆ ಮರೆಯುಂಟೇ? ಹೇಳಾ ಲಿಂಗವೇ?

ದಾಳಿಕಾರಂಗೆ ಧರ್ಮವುಂಟೆ?

ಕಂಗಳಿಗೆ ಕರುಳುಂಟೆ? ಗುಹೇಶ್ವರಾ

ನಿಮ್ಮ ಶರಣರು ಮೂರು ಲೋಕವರಿಯೆ ನಿಶ್ಚಟರಯ್ಯಾ... 

Allama Prabhu Vachanagalu in Kannada

8)  ಮಂತ್ರ ಕಲಿತಡೇನು?

ಪುನರುಚ್ಚರಣೆ ಮಾಡಿದಲ್ಲದೆ ಸಿದ್ಧಿಸದು.

ಮದ್ದನರಿದು ಫಲವೇನು?

ಪ್ರಯೋಗಿಸಿಕೊಂಡಲ್ಲದೇ ರೋಗ ಮಾಣದು.

ಲಿಂಗವರಿನದಡೇನು?

ನೆನೆದಲ್ಲದೇ ಸಿದ್ಧಿಸದು ಕಾಣಾ ಗುಹೇಶ್ವರಾ... 

Allama Prabhu Vachanagalu in Kannada

9) ತನ್ನಮುಟ್ಟಿ ನೀಡಿದುದೇ ಪ್ರಸಾದ,

ತನ್ನ ಮುಟ್ಟದೆ ನೀಡಿದುದೇ ಓಗರ,

ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದಿ,

ಇದು ಕಾರಣ ಇಂತಪ್ಪ ಭ್ರತ್ಯಾಚಾರಿಗಲ್ಲದೇ 

ಪ್ರಸಾದವಿಲ್ಲ ಗುಹೇಶ್ವರಾ... 

Allama Prabhu Vachanagalu in Kannada

10) ನಾನು ಘನ ತಾನು ಘನವೆಂಬ ಹಿರಿಯರುಂಟೆ?

ಜಗದೊಳಗೆ ಹಿರಿಯರ ಹಿರಿಯತನ ದಿಂದೇನಾಯಿತ್ತು?

ಹಿರಿಕಿರಿದೆಂಬ ಶಬ್ದವಡಗಿದರೆ

ಆತನೇ ಶರಣ ಗುಹೇಶ್ವರಾ... 

Allama Prabhu Vachanagalu in Kannada

11) ಎಸೆಯದಿರು ಎಸೆಯದಿರು ಕಾಮಾ

ನಿನ್ನ ಬಾಣ ಹುಸಿಯಲೇಕೋ?

ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ 

ಇದು ಸಾಲದೇ ನಿನಗೆ?

ಗುಹೇಶ್ವರ ಲಿಂಗದ ವಿರಹದಲ್ಲಿ ಬೆಂದವರ

ಮರಳಿ ಸುಡಲುಂಟೇ ಮರುಳ ಕಾಮಾ... 

Allama Prabhu Vachanagalu in Kannada

12) ಅನುಭಾವದಿಂದ ಹುಟ್ಟಿತ್ತು ಲಿಂಗ,

ಅನುಭಾವದಿಂದ ಹುಟ್ಟಿತ್ತು ಜಂಗಮ,

ಅನುಭಾವದಿಂದ ಹುಟ್ಟಿತ್ತು ಪ್ರಸಾದ,

ಅನುಭಾವದನುವಿನಲ್ಲಿ ಗುಹೇಶ್ವರ ಲಿಂಗವನುಪಮಸುಖಿ... 

Allama Prabhu Vachanagalu in Kannada


13) ಮಾತೆಂಬುದು ಜ್ಯೋತಿರ್ಲಿಂಗ

ಸ್ವರವೆಂಬುದು ಪರತತ್ವ

ತಾಳೇಷ್ಟ್ರ ಸಂಪುಟವೆಂಬುದೇ ನಾದಬಿಂದು. 

ಕಳಾತೀತ ಗುಹೇಶ್ವರ ಶರಣರು ನುಡಿದು ಸೂತಕಿಗಳಲ್ಲ ಕೇಳಾ ಮರುಳೆ... 

Allama Prabhu Vachanagalu in Kannada

14) ಶಬ್ದ ಸೂತಕವೆಂಬರು ಶಬ್ದಕ್ಕೆ ಸೂತಕವುಂಟೇ?

ತನ್ನ ಸಂದೇಹವಲ್ಲದೇ ಗಾಳಿಗೆ ಧೂಳಿ ಲೇಪವಪ್ಪುದೇ?

ಗುಹೇಶ್ವರ ಲಿಂಗಕ್ಕೆ ಆಭಾವವಿಲ್ಲಾ ಸಂಗನ ಬಸವಣ್ಣ... 

Allama Prabhu Vachanagalu in Kannada

15) ಪೃಥ್ವಿಯನತಿಗಳೆದು ಅಪ್ಪುವಿಲ್ಲ,

ಅಪ್ಪುವಿನತಿಗಳೆದು ಅಗ್ನಿಯಿಲ್ಲ,

ಅಗ್ನಿಯನತಿಗಳೆದು ವಾಯುವಿಲ್ಲ,

ವಾಯುವಿನತಿಗಳೆದು ನಾದವಿಲ್ಲ,

ಬಿಂದುವಿನತಿಗಳೆಂದು ಕಳೆಯಿಲ್ಲ,

ಕಳೆಯನತಿಗಳೆದು ಆತ್ಮವಿಲ್ಲ,

ಆತ್ಮನತಿಗಳೆಂದು ಗುಹೇಶ್ವರನೆಂಬ ಲಿಂಗವಿಲ್ಲ... 

Allama Prabhu Vachanagalu in Kannada

16) ಗಗನದ ಮೇಘಂಗಳೆಲ್ಲಾ ಸುರಿದವು ಭೂಮಿಯ ಮೇಲೆ 

ಭೂಮಿ ದಣಿಯುಂಟು ಸಸಿಗಳೆಲ್ಲಾ ಬೆಳೆದವು

ಬಹು ವಿಕಾರದಿಂದ ಬೆಳೆದ ಸಸಿಯ ವಿಕಾರನೆಂದು 

ಗ್ರಹಿಸುವ ಕಾಮವಿಕಾರಿಗಳು ಲಿಂಗವನೆತ್ತ ಬಲ್ಲರು ಗುಹೇಶ್ವರಾ?

Allama Prabhu Vachanagalu in Kannada

17) ದೇಶ ಗುರಿಯಾಗಿ ಲಯವಾಗಿ ಹೋದವರ ಕಂಡೆ,

ತಮಂಧ ಗುರಿಯಾಗಿ ಲಯವಾಗಿ ಹೋದವರ ಕಂಡೆ,

ಕಾಮ ಗುರಿಯಾಗಿ ಬೆಂದುಹೋದವರ ಕಂಡೆ,

ನೀ ಗುರಿಯಾಗಿ ಹೋದವರನಾರನೂ ಕಾಣೆ ಗುಹೇಶ್ವರಾ... 

Allama Prabhu Vachanagalu in Kannada

18) ಆಸೆಗೆ ಸತ್ತುದು ಕೋಟಿ

ಆಮಿಷಕ್ಕೆ ಸತ್ತುದು ಕೋಟಿ

ಹೊನ್ನು ಹೆಣ್ಣು ಮಣ್ಣಿಗೆ ಸತ್ತುದು ಕೋಟಿ

ಗುಹೇಶ್ವರಾ ನಿಮಗಾಗಿ ಸತ್ತವರನಾರೆನೂ ಕಾಣೆ... 

Allama Prabhu Vachanagalu in Kannada

19) ಎಣ್ಣೆ ಬೇರೆ, ಬತ್ತಿ ಬೇರೆ ಎರಡು ಕೂಡಿಸೊಡರಾಯಿತು.

ಪುಣ್ಯ ಬೇರೆ ಪಾಪ ಬೇರೆ, ಎರಡು ‌ಕೂಡಿ ಒಡಲಾಯಿತು.

ಮಿಗಬಾರದು, ಮಿಗದಿರಬಾರದು,

ಒಡಲಿಚ್ಚೆಯ ಸಲಿಸದೆ ನಿಮಿಷವಿರಬಾರದು.

ಕಾಯಾಗುವಳಿದು, ಮಾಯಾಜ್ಯೋತಿ.

ವಾಯುವ ಕೂಡದ ಮುನ್ನ.

ಭಕ್ತಿಯ ಮಾಡಬಲ್ಲಾತನೇ ದೇವ ಗುಹೇಶ್ವರಾ... 

Allama Prabhu Vachanagalu in Kannada

20) ಧ್ಯಾನ ಸೂತಕ, ಮೌನ ಸೂತಕ,

 ಜಪ ಸೂತಕ, ಅನುಷ್ಟಾನ ಸೂತಕ.

ಗುಹೇಶ್ವರನೆಂಬ ಲಿಂಗವ ನರಿದ ಬಳಿಕ 

ಸೂತಕ ಹಿಂಗಿತ್ತು ಯಥಾಸ್ವೇಚ್ಛೆ... 

Allama Prabhu Vachanagalu in Kannada

21) ಕಣ್ಣು ಕಂಡಲ್ಲದೇ ಮನ ನೆನೆಯದು,

ಆ ಮನ ನೆನೆದಲ್ಲಿಗೆ ಕಾಲು ನಡೆವುದು,

ಕಾಲು ನಡೆದಲ್ಲದೇ ಕಾರ್ಯವಾಗದು‌.

ಕಾಲೆಂದರೆ ನೀ ಚಲಿಸುವ ವರ್ತನೆ,

ಆ ವರ್ತನಾಚಾರವೆಲ್ಲವು ಲಿಂಗವು,

ಇದು ಕಾರಣ ಲಿಂಗವಹಿಂಗಿದ ಮಾಟ

ಮೀಸಲಿಲ್ಲದ ಮನೆದೇವರ ಹಬ್ಬದಂತೆ.

ನಮ್ಮ ಗುಹೇಶ್ವರ ಲಿಂಗಕ್ಕೆ

ಇದೇ ದೇಹ ಶೌಚ ಕೇಳಾ ಚಂದಯ್ಯ...

Allama Prabhu Vachanagalu in Kannada

22) ಕಾಡುಗಿಚ್ಚೆಂದರೆ ಅಡವಿಯೆ ಗುರಿ,

ನೀರುಗಿಚ್ಚೆಂದರೆ ಸಮುದ್ರವೆ ಗುರಿ,

ಒಡಲುಗಿಚ್ಚೆಂದರೆ ಆತನುವೆ ಗುರಿ,

ಕಾಲಾಗ್ನಿಯೆಂದರೆ ಲೋಕಂಗಳೇ ಗುರಿ,

ಶಿವಶರಣರ ಮನದಲ್ಲಿ ಕೋಪಾಗ್ನಿಯೆದ್ದರೆ ನಿಂದಕರೆ ಗುರಿ,

ಗುಹೇಶ್ವರಾ ನಿಮ್ಮ ಮಾಯದ ಹೊಡೆಗಿಚ್ಚಿಂಗೆ ನಾನು ಗುರಿಯಲ್ಲ ಕೇಳಾ... ..

Allama Prabhu Vachanagalu in Kannada

23) ಬ್ರಹ್ಮ ಘನವೆಂದರೆ ಬ್ರಹ್ಮನ ನುಂಗಿತ್ತು ಮಾಯೆ,

ವಿಷ್ಣು ಘನವೆಂದರೆ ವಿಷ್ಣುವ ನುಂಗಿತ್ತು ಮಾಯೆ,

ರುದ್ರಘನವೆಂದಡೆ ರುದ್ರನ ನುಂಗಿತ್ತು ಮಾಯೆ,

ತಾ ಘನವೆಂದರೆ ತನ್ನ ನುಂಗಿತ್ತು ಮಾಯೆ,

ಸರ್ವವೂ ನಿನ್ನ ಮಾಯೆ,

ಒಬ್ಬರನೊಳಕೊಂಡಿತ್ತೇ? ಹೇಳಾ ಗುಹೇಶ್ವರ... 

Allama Prabhu Vachanagalu in Kannada

24) ಕಾಲುಗಳೆರಡೂ ಗಾಲಿ ಕಂಡಯ್ಯಾ

ದೇಹವೆಂಬುದೊಂದು ತುಂಬಿದ ಬಂಡಿ ಕಂಡಯ್ಯಾ

ಬಂಡಿಯ ಹೊಡೆವರು ಐವರು

ಒಬ್ಬರಿಗೊಬ್ಬರು ಸಮವಿಲ್ಲಯ್ಯಾ

ಅದರಿಚ್ಚೆಯನರಿದು ಹೊಡೆಯದಿದ್ದರೆ

ಅದರಚ್ಚು ಮುರಿಯಿತ್ತು ಗುಹೇಶ್ವರಾ...

Allama Prabhu Vachanagalu in Kannada

25) ಇಷ್ಟಲಿಂಗವ ತೋರಿ ಮೃಷ್ಟಾನ್ನವ ಹೊಡೆವವರಿಗೆ 

ಇಷ್ಟಾರ್ಥ ಸಿದ್ಧಿಯಲ್ಲಿಯದೋ?

ಅದೆಲ್ಲಿಯದೋ ಲಿಂಗ? ಅದೆಲ್ಲಿಯದೋ ಜಂಗಮ?

ಅದೆಲ್ಲಿಯದೋ ಪಾದೋದಕ ಪ್ರಸಾದ?

ಅಲ್ಲದಾಟವನಾಡಿ ಎಲ್ಲರೂ ಮುಂದುಗೆಟ್ಟರು ಗುಹೇಶ್ವರ ನಿಮ್ಮಾಣೆ..

Allama Prabhu Vachanagalu in Kannada

26) ಬೆಟ್ಟಕ್ಕೆ ಚಳಿಯಾದೆಡೆ ಏನ ಹೊದಿಸುವರಯ್ಯಾ?

ಬಯಲು ಬತ್ತಲೆಯಿದ್ದರೆ ಏನ ನುಡಿಸುವರಯ್ಯಾ?

ಭಕ್ತನ ಭವಿಯೊಡನೆ ಏನನ ನುಪಮಿಸುವೆನಯ್ಯಾ ಗುಹೇಶ್ವರಾ?

Allama Prabhu Vachanagalu in Kannada

27) ವೇದವೆಂಬುದು ಓದಿನ ಮಾತು

ಶಾಸ್ತ್ರವೆಂಬುದು ಸಂತೆಯ ಸುದ್ದಿ

ಪುರಾಣವೆಂಬುದು ಪುಂಡರ ಗೋಷ್ಟಿ

ತರ್ಕವೆಂಬುದು ಟಗರ ಹೋರಾಟ 

ಭಕ್ತಿಯೆಂಬುದು ತೋರೆಂಬ ಲಾಭ

ಗುಹೇಶ್ವರನೆಂಬುದು ಮೀರಿದ ಘನವು... 

Allama Prabhu Vachanagalu in Kannada

28) ವೇದ ವೇಧಿಸಲರಿಯದೇ ಕೆಟ್ಟೆವು

ಪುರಾಣ ಪೂರೈಸಲರಿಯದೇ ಕೆಟ್ಟೆವು

ಶಾಸ್ತ್ರ ಸಾಧಿಸಲರಿಯದೇ ಕೆಟ್ಟೆವು

ಹಿರಿಯರು ತಮ್ಮ ತಾವರಿಯದೇ ಕೆಟ್ಟರು

ತಮ್ಮ ಬುದ್ಧಿ ತಮ್ಮನ್ನೇ ತಿಂದಿತ್ತು

ನಿಮ್ಮನೆತ್ತ ಬಲ್ಲರು ಗುಹೇಶ್ವರ?

Allama Prabhu Vachanagalu in Kannada

29) ಬೆಲ್ಲದ ಪುತ್ಥಳಿಯ ಕೈಯಲ್ಲಿ ಹಿಡಿದು 

ಎಲ್ಲಿ ಚುಂಬಿಸಿದರೂ ಇನಿದಹುದು

ಒಳ್ಳೆಯ ಬೇವಿನ ಹಣ್ಣನ್ನು ಮೆಲ್ಲನೆ 

ಚುಂಬಿಸಿದರೆ ಇನಿದಹುದೇ?

ಎಲ್ಲ ವಿದ್ಯೆಯನು ಬಲ್ಲವೆಂಬರು 

ಅವರು ಸಲ್ಲದೇ ಹೋದರಯ್ಯಾ ಗುಹೇಶ್ವರಾ... 

Allama Prabhu Vachanagalu in Kannada

30) ನಾನೆಂಬುದು ಪ್ರಮಾಣ

ನೀನೆಂಬುದು ಪ್ರಮಾಣ

ಸ್ವಯಂವೆಂಬುದು ಪ್ರಮಾಣ 

ಪರವೆಂಬುದು ಪ್ರಮಾಣ 

ಪ್ರಮಾಣವೆಂಬುದು ಪ್ರಮಾಣ

ಗುಹೇಶ್ವರನೆಂಬುದು ಅಪ್ರಮಾಣ... 

Allama Prabhu Vachanagalu in Kannada

31) ಆದಿ ಅನಾದಿ ಒಂದಾದಂದು 

ಸೂರ್ಯ ಚಂದ್ರರೊಂದಾದಂದು

ಧರೆಯಾಕಾಶ ಒಂದಾದೊಂದು 

ಗುಹೇಶ್ವರ ಲಿಂಗ ನಿರಾಳನು... 

Allama Prabhu Vachanagalu in Kannada

32) ತಾಯಿ ತಂದೆಯಿಲ್ಲದ ಕಂದಾ

ನಿನಗೆ ನೀನೇ ಹುಟ್ಟಿದೆಯಲ್ಲಾ

ನಿನ್ನ ಪರಿಣಾಮವೇ ನಿನಗೆ ಪ್ರಾಣ

ತೃಪ್ತಿಯಾಗಿರ್ದೆಯಲ್ಲಾ

ಬೇಧಕರಿಗೆ ಅಬೇಧ್ಯನಾಗಿ

ನಿನ್ನ ನೀನೇ ಬೆಳಗುತಿರ್ದೆಯಲ್ಲಾ

ನಿನ್ನ ಚಾರಿತ್ರ್ಯ ನಿನಗೆ ಸಹಜ ಗುಹೇಶ್ವರ... 

Allama Prabhu Vachanagalu in Kannada

33) ಶಿಲೆಯೊಳಗಣ ಪಾವಕನಂತೆ 

ಉದಕದೊಳಗಣ ಪ್ರತಿಬಿಂಬದಂತೆ 

ಬೀಜದೊಳಗಣ ನಿಶ್ಯಬ್ದದಂತೆ

ಗುಹೇಶ್ವರ ನಿಮ್ಮ ಶರಣ ಸಂಬಂಧ‌‌‌...

Allama Prabhu Vachanagalu in Kannada

34) ಸತ್ತು ಹುಟ್ಟಿ ಕೆಟ್ಟವರೆಲ್ಲರೂ ದೇವಲೋಕಕ್ಕೆ 

ಹೋದರೆಂಬ ಬಾಲಭಾಷೆಯ ಕೇಳಲಾಗದು 

ಸಾಯದ ಮುನ್ನ ಸ್ವಯವನರಿದಡೆ

ದೇವನೊಲಿವ ನಮ್ಮ ಗುಹೇಶ್ವರ... 

Allama Prabhu Vachanagalu in Kannada

35) ಪಾತಾಳದಿಂದತ್ತತ್ತ ಮಾತ ಬಲ್ಲವರಿಲ್ಲ

ಗಗನದಿಂದ ಮೇಲೆ ಅನುಭಾವ ತಾನಿಲ್ಲ

ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ

ಹೊರಗಣ ಹೊರಗನು ಅರಿಯಬಲ್ಲವರಿಲ್ಲ

ಹಿಂದಣ ಹಿಂದನು ಮುಂದಣ ಮುಂದನು

ತಂದೆ ತೋರಿದನು ನಮ್ಮ ಗುಹೇಶ್ವರನು... 

Allama Prabhu Vachanagalu in Kannada

36) ಸಾವ ಜೀವಕ್ಕೆ ಗುರುಬೇಡ

ಸಾಯದ ಜೀವಕ್ಕೆ ಗುರುಬೇಡ

ಗುರುವಿಲ್ಲದೇ ಕೂಡಲ್ಲಿಕ್ಕೆ ಬಾರದು

ಇನ್ನಾವ ಠಾವಿಂಗೆ ಗುರುಬೇಕು?

ಸಾವ ಜೀವ ಸಂಬಂಧದ ಠಾವ 

ತೋರ ಬಲ್ಲಾತನೇ ಗುರು ಗುಹೇಶ್ವರನು... 

Allama Prabhu Vachanagalu in Kannada

37) ಕೋಪ ತಾಪಮಂ ಬಿಟ್ಟು,

ಭ್ರಾಂತಿ ಭ್ರಮೆಯಂ ಬಿಟ್ಟು

ಜಂಗಮವಾಗಬೇಕು ಕಾಣಿರೇ ಮರುಳುಗಳಿರಾ

ಇಂತಿ ಷಡುಲೊಭದ ರುಚಿ ಹಿಂಗಿ

ಜಂಗಮವಾದದಲ್ಲದೇ ಭವಹಿಂಗದು ಕಾಣಾ ಗುಹೇಶ್ವರಾ... 

Allama Prabhu Vachanagalu in Kannada

38) ಅರಸುತಿಹ ಬಳ್ಳಿ ಕಾಲ ಸುತ್ತಿತೆಂಬಂತೆ

ಬಯಸುವ ಬಯಕೆ ಕೈಸಾರಿದಂತೆ 

ಬಡವ ನಿಧಾನವ ನಡಹಿ ಕಂಡಂತೆ

ನಾನರಸುತ್ತಲತ್ತ ಬಂದು

ಭಾವಕ್ಕಗಮ್ಯವಾದ ಮೂರ್ತಿಯ ಕಂಡೆ ನೋಡಾ.

ಎನ್ನ ಅರವಿನ ಹರುವ ಕಂಡೆ ನೋಡಾ

ಎನ್ನ ಒಳಹೊರಗೆ ಎಡೆದೆಂಹಿಲ್ಲದೆ

ಥಳಥಳಿಸಿ ಹೊಳೆಯುತ್ತಿಪ್ಪ

ಅಖಂಡ ಜ್ಯೋತಿಯ ಕಂಡೆ ನೋಡಾ.

ಕುರುಹಳಿದ ಕರಸ್ಥಲದ ನಿಬ್ಬೆರಗಿನ 

ನೋಟದ ಎನ್ನ ಪರಮ ಗುರುವ 

ಕಂಡು ಬದುಕಿದೆನು ಕಾಣಾ ಗುಹೇಶ್ವರಾ... 

Allama Prabhu Vachanagalu in Kannada

39) ಬಿರುಗಾಳಿ ಬೀಸಿ ಮರ ಮುರಿವಂತಹ ಸುಳಿಹ ಸುಳಿಯದೇ;

ತಂಗಾಳಿ ಪರಿಮಳದೊಡಗೂಡಿ ಸುಳಿವಂತೆ ಸುಳಿಯಬೇಕು.

ಸುಳಿದಡೆ ನೆಟ್ಟನೆ ಜಂಗಮವಾಗಿ ಸುಳಿಯಬೇಕು.

ನಿಂದರೆ ನೆಟ್ಟಗೆ ಭಕ್ತನಾಗಿ ನಿಲಬೇಕು.

ಸುಳಿದು ಜಂಗಮವಾಗಲರಿಯದ ನಿಂದು ಭಕ್ತನಾಗಲರಿಯದ 

ಉಭಯ ಭ್ರಷ್ಟರನೇನೆಂಬೆ ಗುಹೇಶ್ವರಾ... 

Allama Prabhu Vachanagalu in Kannada

3) ಅಕ್ಕ ಮಹಾದೇವಿಯ ವಚನಗಳು - Akkamahadevi Vachanagalu in Kannada

ಅಕ್ಕ ಮಹಾದೇವಿಯ ವಚನಗಳು - Akka Mahadevi Vachan in Kannada

1) ಲೋಕದ ಚೇಷ್ಟೇಗೆ ರವಿ ಬೀಜವಾದಂತೆ

ಕರಣಂಗಳ ಚೇಷ್ಟೇಗೆ ಮನವೇ ಬೀಜ

ಎನಗುಳ್ಳದೊಂದು ಮನ

ಆ ಮನ ನಿಮ್ಮಲ್ಲಿ ಒಡವೆರೆದ ಬಳಿಕ

ಏನಗೆ ಭವವುಂಟೇ ಚೆನ್ನಮಲ್ಲಿಕಾರ್ಜುನಯ್ಯ... 

2) ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ

ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ

ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ

ನೆನಹಿಂಗೆ ಆರಿವಾಗಿ ಕಾಡಿತ್ತು ಮಾಯೆ

ಜಗದ ಜಂಗಳಿಗಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆ

ಚೆನ್ನಮಲ್ಲಿಕಾರ್ಜುನ ನೀನೊಪ್ಪಿದ ಮಾಯೆಯ ಯಾರು ಗೆಲ್ಲಲಾರರು... 

3) ಹಸಿವಾದೊಡೆ ಭಿಕ್ಷಾನ್ನಗಳುಂಟು

ತೃಷೆಯಾದರೆ ಕೆರೆ ಹಳ್ಳ ಭಾವಿಗಳುಂಟು

ಶಯನಕ್ಕೆ ಹಾಳು ದೇಗುಲಗಳುಂಟು

ಚೆನ್ನಮಲ್ಲಿಕಾರ್ಜುನಯ್ಯ ಆತ್ಮ ಸಂಗಾತಕ್ಕೆ ನೀನೆನಗುಂಟು... 

4) ಕಲ್ಲುಹೊತ್ತು ಕಡಲೊಳಗೆ ಮುಳುಗಿದೊಡೆ

ಎಡರಿಂಗೆ ಕಡೆಯುಂಟೆ ಅವ್ವ?

ಉಂಡು ಹಸಿವಾತೆಂದೊಡೆ ಭಂಗವೆಂಬೆ

ಕಂಡ ಕಂಡ ಠಾವಿನಲ್ಲಿ ಮನಬೆಂದೊಡೆ 

ಗಂಡ ಚೆನ್ನಮಲ್ಲಿಕಾರ್ಜುನೆಂತೊಲಿವನಯ್ಯ... 

5) ಹುಟ್ಟು ಹೊರೆಯ ಕಟ್ಟಳೆಯ ಕಳೆದನವ್ವ

ಹೊನ್ನು ಮಣ್ಣಿನ ಮಾಯೆಯ ಮಾಣಿಸಿದನವ್ವ

ಎನ್ನ ತನುವಿನ ಲಜ್ಜೆಯನಿಳುಹಿ ಎನ್ನಮನದ

ಕತ್ತಲೆಯ ಕಳೆದ ಚೆನ್ನಮಲ್ಲಿಕಾರ್ಜುನನಯ್ಯನ 

ಒಳಗಾದವಳನೇನೆಂದು ನುಡಿಯಿಸುವಿರವ್ವ....

6) ಹಗಲಿನ ಕೂಟಕ್ಕೆ ಹೋರಿಬೆಂಡಾದೆ 

ಇರುಳಿನ ಕೂಟಕ್ಕೆ ಇಂಬಂದು ಹತ್ತಿದೆ

ಕನಸಿನಲ್ಲಿ ಮನ ಸಂಗವಾಗಿ

ಮನಸಿನಲ್ಲಿ ಮೈಮರೆದು ಸಂಗವಾಗಿರ್ದೆ 

ಚೆನ್ನಮಲ್ಲಿಕಾರ್ಜುನನೊಪ್ಪಚ್ಚಿ ಕೂಡಿ ಕಣ್ತೆರೆದೆನವ್ವ... 

7) ಅನ್ನವ ನೀಡುವವರಿಗೆ ಧಾನ್ಯವೇ ಶಿವಲೋಕ 

ಅರ್ಥವ ಕೊಡುವವರಿಗೆ ಪಾಷಾಣವೇ ಶಿವಲೋಕ

ಹೆಣ್ಣು ಹೊನ್ನು ಮಣ್ಣು ಮೂರನೂ ಕಣ್ಣಿನಲ್ಲಿ ನೋಡಿ

ಕಿವಿಯಲ್ಲಿ ಕೇಳಿ ಕೈಮುಟ್ಟಿ ಮಾಡುವ ಭಕ್ತಿ 

ಸಣ್ಣವರ ಸಮಾರಾಧನೆಯಾಯಿತು 

ತನ್ನ ನಿತ್ತು ತುಷ್ಟಿವಡೆವರೆನಗೆ ತೋರಾ

ಶ್ರೀಗಿರಿ ಚೆನ್ನಮಲ್ಲಿಕಾರ್ಜುನ... 

8) ನಮಗೆ ನಮ್ಮ ಲಿಂಗದ ಚಿಂತೆ 

ನಮಗೆ ನಮ್ಮ ಭಕ್ತರ ಚಿಂತೆ

ನಮಗೆ ನಮ್ಮ ಚೆನ್ನಮಲ್ಲಿಕಾರ್ಜುನಯ್ಯನ 

ಚಿಂತೆಯಲ್ಲದೇ ಲೋಕದ ಮಾತು ನಮಗೇತಕಣ್ಣ... 

9) ನೋಡಿ ನುಡಿಸಿ ಮಾತಾಡಿಸಿದಡೊಂದು ಸುಖ

ಏನು ಮಾಡಲಪ್ಪ ನಿಮ್ಮ ಶರಣರನುಭಾವ

ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ಶರಣರ ಸದ್ಗೋಷ್ಟಿ ಏನು ಮಾಡಲಯ್ಯ... 

10) ನಾಳೆ ಬರುವುದು ನಮಗಿಂದೇ ಬರಲಿ

ಇಂದು ಬರುವುದು ನಮಗೀಗಲೇ ಬರಲಿ

ಆಗೀಗ ಎನ್ನದಿರು ಚೆನ್ನಮಲ್ಲಿಕಾರ್ಜುನ... 

11) ತೆರಣಿಯ ಹುಳು ತನ್ನ ಸ್ನೇಹದಲ್ಲಿ ಮನೆಯ ಮಾಡಿ

ತನ್ನ ನೂಲು ತನ್ನ ಸ್ತುತಿಸಾವ ತೆರನಂತೆ

ಮನಬಂದುದ ಬಯಸಿ ಬೇವುತ್ತಿದ್ದೇನೆ

ಅಯ್ಯಾ ಎನ್ನ ಮನದ ದುರಾಸೆಯ ಮಾಣಿಸಿ 

ನಿಮ್ಮತ್ತ ತೋರಾ ಚೆನ್ನಮಲ್ಲಿಕಾರ್ಜುನ... 

12) ಒಮ್ಮೆ ಕಾಮನ ಕಾಲ ಹಿಡಿದೆ

ಒಮ್ಮೆ ಚಂದ್ರಮಂಗೆ ಸೆರಗೊಡ್ಡಿ ಬೇಡುವೆ

ಸುಡು ವಿರಹವನು ಅರಿಗೆ ದೃತಿಗೆಡುವೆ

ಚೆನ್ನಮಲ್ಲಿಕಾರ್ಜುನ ದೇವನೇ ನೊಲ್ಲದ ಕಾರಣ

ಎಲ್ಲರಿಗೆ ಹಂಗಿಲೆಯಾದೆನವ್ವ...‌

13) ಎನ್ನ ಮಾಯದ ಮದವ ಮುರಿಯಯ್ಯ

ಎನ್ನ ಕಾಯದ ಕತ್ತಲೆಯ ಕಳೆಯಯ್ಯ

ಎನ್ನ ಜೀವನದ ಜಂಜಡವ ಮಾಣಿಸಯ್ಯ

ಎನ್ನದೇವ ಚೆನ್ನಮಲ್ಲಿಕಾರ್ಜುನದೇವಯ್ಯ

ಎನ್ನ ಸುತ್ತಿದ ಪ್ರಪಂಚವ ಬಿಡಿಸು ನಿಮ್ಮ ಧರ್ಮ... 

14) ಮುಡಿ ಬಿಟ್ಟು ಮೊಗಬಾಡಿ ತನು ಕರಗಿದವಳ

ಎನ್ನನೇಕ ನುಡಿಸುವಿರಿ ಎಲೆ ಅಣ್ಣಗಳಿರಾ

ಎನ್ನನೇಕೆ ಕಾಡುವಿರಿ? ಎಲೆ ತಂದೆಗಳಿರಾ

ಬಲು ಹಳಿದು ಭವಗೆಟ್ಟು ಛಲಗೆಟ್ಟು ಭಕ್ತೆಯಾಗಿ ಚೆನ್ನಮಲ್ಲಿಕಾರ್ಜುನನ ಕೂಡಿ ಕುಲವಳಿದವಳ... 

15) ಅಲ್ಲೆಂದೆಡೆ ಉಂಟೆಂಬುದೀ ಮಾಯೆ

ಒಲ್ಲೆನೆಂದಡೆ ಬಿಡದೀ ಮಾಯೆ

ಎನಗಿದು ವಿಧಿಯೇ? ಚೆನ್ನಮಲ್ಲಿಕಾರ್ಜುನ

ಒಪ್ಪಿ ಮರೆವೊಕ್ಕಡೆ ಮತ್ತುಂಟೆ? ಕಾಯಯ್ಯ ಶಿವಧೊ...‌

16) ಸರ್ಪನ ಬಾಯಿ ಕಪ್ಪೆ ನೊಣಕ್ಕೆ ಹಾರುವಂತೆ

ಅಪ್ಯಾಯನ ಬಿಡದು ಕಾರ್ಯ ವರ್ವಿತನೆಂಬ ಹಸಿವುನೋಡಾ

ನಾನು ಭಕ್ತನೆಂಬ ನಾಚಿಕೆಯ ನೋಡಾ 

ನಾನು ಯುಕ್ತನೆಂಬ ಹೇಸಿಕೆಯ ನೋಡಾ

ಓಗರವಿನ್ನಾಗದು ಪ್ರಸಾದ ಮುನ್ನಿಲ್ಲ

ಚೆನ್ನಮಲ್ಲಿಕಾರ್ಜುನ ಉಭಯವಡಗರನ್ನಕ್ಕೆ... 

17) ಎನ್ನಂತೆ ಪುಣ್ಯಗೈದವರುಂಟೆ?

ಎನ್ನಂತೆ ಭಾಗ್ಯಂಗೈದವರುಂಟೆ?

ಕಿನ್ನರ ನಂತಪ್ಪ ಸೋದರನೆನಗೆ

ಏಳೇಳು ಜನ್ಮಗಳಲ್ಲಿ ಶಿವಭಕ್ತರೇ ಬಂಧುಗಳೆನಗೆ 

ಚೆನ್ನಮಲ್ಲಿಕಾರ್ಜುನಂತಪ್ಪ ಗಂಡನೋಡಾ ಎನಗೆ... 

18) ಸಂಗದಿಂದಲ್ಲದೇ ಅಗ್ನಿ ಹುಟ್ಟದು

ಸಂಗದಿಂದಲ್ಲದೇ ಬೀಜ ಮೊಳೆಯದು

ಸಂಗದಿಂದಲ್ಲದೇ ದೇಹವಾಗದು

ಸಂಗದಿಂದಲ್ಲದೇ ಸರ್ವಸುಖ ದೋರದು

ಚೆನ್ನಮಲ್ಲಿಕಾರ್ಜುನ ದೇವಯ್ಯ ನಿಮ್ಮ ಶರಣರ

ಅನುಭವ ಸಂಗದಿಂದ ನಾ ಪರಮ ಸುಖಿಯಾದೆನು... 

19) ಊರ ಸೀರೆಗೆ ಅಗಸ ತಡಬಡ ಗೊಂಬಂತೆ

ಹೊನ್ನೆನ್ನದು ಮಣ್ಣೆನ್ನದು ಹೆಣ್ಣೆನ್ನದು 

ಎಂದು ಸಿನೆನೆನೆದು ನಿಮ್ಮನರಿಯದ ಕಾರಣ 

ಕೆಮ್ಮನೇ ಕೆಟ್ಟೆನಯ್ಯ ಚೆನ್ನಮಲ್ಲಿಕಾರ್ಜುನಯ್ಯ... 

20) ಎಮ್ಮೆಗೊಂದು ಚಿಂತೆ 

ಸಮಗಾರನಿಗೊಂದು ಚಿಂತೆ

ನನಗೆ ನನ್ನ ಚಿಂತೆ 

ತನಗೆ ತನ್ನ ಕಾಮದ ಚಿಂತೆ

ಒಲ್ಲೆ ಹೋಗು ಶರಗ ಬಿಡು ಮರಳೆ

ನನಗೆ ಚೆನ್ನಮಲ್ಲಿಕಾರ್ಜುನ ದೇವರು

ಒಲಿವನೋ ಒಲೆಯನೋ ಎಂಬ ಚಿಂತೆ... 

21) ಪುರುಷನ ಮುಂದೆ ಮಾಯೆ ಸ್ತ್ರೀಯೆಂಬ

ಅಭಿಮಾನವಾಗಿ ಕಾಡಿತ್ತು ನೋಡಾ

ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ

ಅಭಿಮಾನವಾಗಿ ಕಾಡಿತ್ತು ನೋಡಾ

ಲೋಕವೆಂಬ ಮಾಯೆಗೆ ಶರಣಚಾರಿತ್ರ 

ಮರುಳಾಗಿ ತೋರುವದು ನೋಡಾ

ಚೆನ್ನಮಲ್ಲಿಕಾರ್ಜುನನೊಲಿದೆ ಶರಣಂಗೆ

ಮಾಯೆಯಿಲ್ಲ ಮರಹಿಲ್ಲ ಅಭಿಮಾನವೂ ಇಲ್ಲ...‌

22) ನೆಲದ ಮರೆಯ ನಿಧಾನದಂತೆ

ಫಲದ ಮರೆಯ ರುಚಿಯಂತೆ

ಶಿಲೆಯ ಮರೆಯ ಹೇಮದಂತೆ

ತಿಲದ ಮರೆಯ ತೈಲದಂತೆ

ಮರದ ಮರೆಯ ಬೀಜದಂತೆ

ಭಾವದ ಮರೆಯ ಬ್ರಹ್ಮವಾಗಿಪ್ಪ

ಚೆನ್ನಮಲ್ಲಿಕಾರ್ಜುನನ ನಿಲುವನಾರೂ ಅರಿಯಬಾರದು... 

23) ಸುಖದ ಸುಖಗಳ ಸಂಭಾಷಣೆಯಿಂದ

ದು:ಖಕ್ಕೆ ವಿಶ್ರಾಮವಾಗಿತ್ತು

ಭಾವಕ್ಕೆ ಭಾವ ತಾರ್ಕಣೆಯಾದಲ್ಲಿ

ನೆನಹಕ್ಕೆ ವಿಶ್ರಾಮವಾಗಿತ್ತು

ಬೆಚ್ಚು ಬೆರಸಲೊಡನೆ ಮಚ್ಚು ಒಳಗೊಂಡಿತಯ್ಯಾ

ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ‌ಶರಣರ ಸಂಗದಿಂದ... 

24) ಹಾವಿನ ಬಾಯ ಹಲ್ಲಕಳೆದು ಹಾವನಾಡಿಸಬಲ್ಲದೆ 

ಹಾವಿನ ಸಂಗವೇ ಲೇಸು ಕಂಡಯ್ಯ

ಕಾಯದ ಸಂಗವ ವಿವರಿಸಬಲ್ಲದೆ

ಕಾಯದ ಸಂಗವೇ ಲೇಸು ಕಂಡಯ್ಯ

ತಾಯಿ ರಕ್ಕಸಿ ಆದಂತೆ ಕಾಯ ವಿಕಾರವು

ಚೆನ್ನಮಲ್ಲಿಕಾರ್ಜುನಯ್ಯಾ ನೀನೊಲಿದವರು ಕಾಯಗೊಂಡಿದ್ದರೆನಬೇಡ...

25) ಗಗನ ಗುಂಪ ಚಂದ್ರಮ ಬಲ್ಲುದಲ್ಲದೇ

ಮೇಲಿದ್ದಾಡುವ ಹದ್ದು ಬಲ್ಲುದೇ ಅಯ್ಯ?

ನದಿಯ ಗುಂಪ ತಾವರೆ ಬಲ್ಲುದಲ್ಲದೇ

ತಡಿಯಲ್ಲಿದ್ದ ಹೊನ್ನೆವರಿಕೆ ಬಲ್ಲುದೇ ಅಯ್ಯ?

ಪುಷ್ಪದ ಪರಿಮಳದ ದುಂಬಿ ಬಲ್ಲುದಲ್ಲದೇ

ಕಡೆಯಲ್ಲಿದ್ದಾಡುವ ನೊರಜು ಬಲ್ಲುದೇ ಅಯ್ಯ?

ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ಶರಣರ ನಿಲುವ ನೀವೇ ಬಲ್ಲರಲ್ಲದೇ

ಈ ಕೋಣನ ಮೈಯ ಮೇಲಿಣ ಸೊಳ್ಳೆಗಳೆತ್ತ ಬಲ್ಲವಯ್ಯ...?

26) ಕೋಲ ತುದಿಯ ಕೋಡಗದಂತೆ

ನೇಣ ತುದಿಯ ಬೊಂಬೆಯಂತೆ 

ಆಡಿದೆನಯ್ಯ ನೀನಾಡಿಸಿದಂತೆ 

ನಾನು ನುಡಿದ್ದೆನಯ್ಯ ನೀನುಡಿಸಿದಂತೆ

ನಾನಿದ್ದೆನಯ್ಯ ನೀನಿರಿಸಿದಂತೆ 

ಜಗದಯಂತ್ರವಾಹಕ ಚೆನ್ನಮಲ್ಲಿಕಾರ್ಜುನ ಸಾಕೆಂಬನ್ನಕ್ಕ... 

27) ಹರಿಯ ನುಂಗಿತ್ತು ಮಾಯೆ

ಅಜನ ನುಂಗಿತ್ತು ಮಾಯೆ

ಇಂದ್ರನ ನುಂಗಿತ್ತು ಮಾಯೆ

ಚಂದ್ರನ ನುಂಗಿತ್ತು ಮಾಯೆ

ಬಲ್ಲೆನೆಂಬ ಬಲಗೈಯ್ಯರನುಂಗಿತ್ತು ಮಾಯೆ

ಈರೇಳು ಭುವನವಾರಡಿಗೊಂಡಿತ್ತು ಮಾಯೆ

ಚೆನ್ನಮಲ್ಲಿಕಾರ್ಜುನಯ್ಯ ಎನ್ನ ಮಾಯೆಯ ಮಾಣಿಸು ಕರುಣ... 

28) ಬಿಟ್ಟೇನೆಂದರೆ ಬಿಡದಿ ಮಾಯೆ

ಬಿಡದಿದ್ದರೆ ಬೆಂಬತ್ತಿತು ಮಾಯೆ

ಯೋಗಿಗೆ ಯೋಗಿಣಿಯಾಗಿತ್ತು ಮಾಯೆ

ಸವಣಿಗೆ ಸವಣಿಯಾಗಿತ್ತು ಮಾಯೆ

ಯತಿಗೆ ಪದಾಶಿಯಾಗಿತ್ತು ಮಾಯೆ

ನಿನ್ನ ಮಾಯೆಗೆ ನಾನಂಜುವಳಲ್ಲ

ಚೆನ್ನಮಲ್ಲಿಕಾರ್ಜುನ ದೇವಾ ನಿಮ್ಮಾಣೆ... 

29) ಬಂಜೆ ಬೇನೆಯ ನರಿವಳೇ?

ಬಲದಾಯಿ ಮುದ್ದಬಲ್ಲಳೇ?

ನೊಂದ ನೋವ ನೋವರಿಯದವರೆತ್ತ ಬಲ್ಲರು?

ಚೆನ್ನಮಲ್ಲಿಕಾರ್ಜುನ ನಿರಿದಗಲು ಬಡಲಲ್ಲಿ ಮುರಿದು

ಹೊರಳುವನ್ನೆಳಲನು ನೀವೆತ್ತ ಬಲ್ಲರೇ ಎಲೆ ತಾಯಿಗಳಿರಾ.... 


30) ಹರನೆ ನೀನೆನಗೆ ಗಂಡನಾಗಬೇಕೆಂದು

ಅನಂತಕಾಲ ತಪಿಸಿದ್ದೆ ನೋಡಾ

ಹಸೆಯ ಮೇಲಣ ಮಾತ ಬೆಸಗೊಳಲಟ್ಟಿದರೆ

ಶಶಿಧರನ ಹತ್ತಿರಕೆ ಕಳುಹಿದರೆಮ್ಮವರು 

ಭಸ್ಮವನೆ ಪೂಸಿ ಕಂಕಣವನೆ ಕಟ್ಟಿದರು

ಚೆನ್ನಮಲ್ಲಿಕಾರ್ಜುನ ತನಗೆ ತಾನಾಗಿರಬೇಕೆಂದು... 

31) ಉಸುರಿನ ಪರಿಮಳವಿರಲು ಕುಸುಮದ ಹಂಗೇಕಯ್ಯ?

ಕ್ಷಮೆ ದಯೆ ಶಾಂತಿ ಸೈರಣೆಯಿರಲು

ಸಮಾಧಿಯ ಹಂಗೇಕಯ್ಯ?

ಲೋಕವೇ ತಾನಾದ ಬಳಿಕ ಏಕಾಂತದ ಹಂಗೇಕಯ್ಯ

ಚೆನ್ನಮಲ್ಲಿಕಾರ್ಜುನ...?

32) ಬೆಟ್ಟದಾ ಮೇಲೊಂದು ಮನೆಯ ಮಾಡಿ

ಮೃಗಗಳಿಗಂಜಿದೊಡೇನಯ್ಯ?

ಸಮುದ್ರದಾ ತಡಿಯಲೊಂದು ಮನೆಯ ಮಾಡಿ

ನೊರೆ ತೆರೆಗಳಿಗಂಜಿದೊಡೇನಯ್ಯ?

ಸಂತೆಯೊಳಗೊಂದು ಮನೆಯ ಮಾಡಿ

ಶಬ್ದಕ್ಕೆ ನಾಚಿದೊಡೆಂತಯ್ಯ?

ಚೆನ್ನಮಲ್ಲಿಕಾರ್ಜುನ ದೇವ ಕೇಳಯ್ಯ

ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು

ಬಂದರೆ ಮನದಲ್ಲಿ ಕೋಪವ ತಾಳದೇ 

ಸಮಾಧಾನಿಯಾಗಿರಬೇಕು... 

33) ವೇದಶಾಸ್ತ್ರ ಪುರಾಣಾಗಮಂಗಳೆಲ್ಲ

ಕೊಟ್ಟುತ್ತ ಕುಟ್ಟುತ್ತ ನುಚ್ಚ ತೌಡು ಕಾಣಿಭೋ

ಇವ ಕುಟ್ಟಬೇಕೆ? ಅತ್ತಲಿತ್ತ ಹರಿವ ಮನವ 

ಶಿರವನರಿದಡೆ ಬಟ್ಟಬರಿಯ ಬಯಲು ಚೆನ್ನಮಲ್ಲಿಕಾರ್ಜುನ... 

34) ಚಿನ್ನದ ಸಂಕೋಲೆಯಾದಡೇನು? ಬಂಧನವಲ್ಲದೇ?

ಮುತ್ತಿನ ಬಲೆಯಾದೊಡೇನು? ತೊಡರಲ್ಲವೇ?

ನೆಚ್ಚ ಮೆಚ್ಚಿನ ಭಕ್ತಿಯಲ್ಲಿ ಸಿಕ್ಕಿಕೊಂಡಿದ್ದರೆ

ಭವ ಹಿಂಗುವದೇ ಚೆನ್ನಮಲ್ಲಿಕಾರ್ಜುನ... 

35) ಒಬ್ಬಂಗೆ ಇಹವುಂಟು ಒಬ್ಬಂಗೆ ಪರವುಂಟು 

ಒಬ್ಬಂಗೆ ಇಹಪರವೆರಡೂ ಇಲ್ಲ‌

ಚೆನ್ನಮಲ್ಲಿಕಾರ್ಜುನ ದೇವರ ಶರಣರಿಗೆ ಇಹಪಹವೆರಡೂ ಉಂಟು...

36) ನರ ಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೇ

ಭವ ಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೇ

ಭವಿ ಎಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೇ

ಚೆನ್ನಮಲ್ಲಿಕಾರ್ಜುನನ ತಂದೆನ್ನ ವಶಕ್ಕೆ 

ಕೊಟ್ಟ ಗುರುವೇ ನಮೋ ನಮೋ

37) ಇಳಿನಿಂಬೆ ಮಾವು ಮಾದಳಕ್ಕೆ 

ಹುಳಿ ನೀರನೆರದವರಾರಯ್ಯ?

ಕಬ್ಬು ಬಾಳೆ ನಾರಿವಾಳಕ್ಕೆ ಸಿಹಿ ನೀರ ನೆರೆದವರಾರಯ್ಯ?

ಕಳೆದ ಶಾಲಿಗೆ ಓಗರದ ಉದಕವ ನೆರದವರಾರಯ್ಯ?

ಮರುಗಮಲ್ಲಿಗೆ ಪಚ್ಚೆಮುಡಿವಾಳಕ್ಕೆ 

ಪರಿಮಳದುದಕವ ನೆರೆದವರಾರಯ್ಯ ?

ಇಂತೀ ಜಲವೊಂದೇ ನೆಲವಂದೇ ಆಕಾಶವಂದೇ

ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ

ತನ್ನ ಪರಿಬೇರಾಗಿಹ ಹಾಗೆ 

ಎನ್ನ ದೇವ ಮಲ್ಲಿಕಾರ್ಜುನನಯ್ಯನು

ಹಲವು ಜಗಂಗಳ ಕೂಡಿಕೊಂಡಿದ್ದರೇನು? ತನ್ನ ಪರಿ ಬೇರೆ... 

38) ಮರವಿದ್ದು ಫಲವೇನು ನೆರಳಿಲ್ಲದನ್ನಕ್ಕ?

ಧನವಿದ್ದು ಫಲವೇನು ದಯೆವಿಲ್ಲದನ್ನಕ್ಕ?

ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ?

ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ?

ಅಗಲಿದ್ದು ಫಲವೇನು ಮನವಿಲ್ಲದನ್ನಕ್ಕ?

ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ? ಚೆನ್ನಮಲ್ಲಿಕಾರ್ಜುನ... 

39) ಹಗಲು ನಾಲ್ಕುಜಾವ ಅಶನಕ್ಕೆ ಕುದಿವರು

ಇರುಳು ನಾಲ್ಕುಜಾವ ವ್ಯಸನಕ್ಕೆ ಕುದಿವರು

ಅಗಸ ನೀರೊಳಗಿದ್ದು ಬಾಯಾರಿ ಸತ್ತಂತೆ

ತಮ್ಮೊಳಗಿರ್ದ ಮಹಾಘನವನರಿಯರು ಚೆನ್ನಮಲ್ಲಿಕಾರ್ಜುನ... 

40) ಚಂದನದ ಕಡಿದು ಕೊರೆದು ತೇದೊಡೆ

ನೊಂದೆನೆಂದು ಕಂಪ ಬಿಟ್ಟಿತ್ತೆ?

ತಂದು ಸುವರ್ಣದ ಕಡಿದೊರೆರೊಡೆ 

ಬೆಂದು ಕಳಂಕ ಹಿಡಿದಿತ್ತೆ?

ಸಂದು ಸಂದನು ಕಡಿದು ಕಬ್ಬನು

ತಂದು ಗಾಣದಲ್ಲಿಕ್ಕೇರಿದಡೆ

ಬೆಂದು ಪಾಕಗೊಳೆ ಸಕ್ಕರೆಯಾಗಿ

ನೊಂದೆನೆಂದು ಸವಿಯ ಬಿಟ್ಟಿತ್ತೇ?

ನಾ ಹಿಂದೆ ಮಾಡಿದ ಹೀನಂಗಳೆಲ್ಲದ ತಂದು

ಮುಂದಿಳುಹಲು ನಿಮಗೆ ಹಾನಿ ಎನ್ನತಂದೆ

ಚೆನ್ನಮಲ್ಲಿಕಾರ್ಜುನ ದೇವಯ್ಯ

ಕೊಂದೊಡೆ ಶರಣೆಂಬುದ ಮಾಣೆ... 

41) ತುಂಬಿದುದು ತುಳುಕದು ನೋಡಾ

ನಂಬಿದುದು ಸಂದೇಹಿಸದು ನೋಡಾ

ಒಳಿದುದು ಓಸರಿಸದು ನೋಡಾ

ನೆರೆಯರಿದುದು ಮರೆಯದು ನೋಡಾ 

ಚೆನ್ನಮಲ್ಲಿಕಾರ್ಜುನಯ್ಯ ನೀನೊಲಿದ ಶರಣಂಗೆ 

ನಿಸ್ಸೀಮ ಸುಖ ನೋಡಯ್ಯ...‌

42) ಹೆಣ್ಣು ಹೆಣ್ಣಾದೊಡೆ ಗಂಡಿನ ಸೂತಕ

ಗಂಡು ಗಂಡಾದೊಡೆ ಹೆಣ್ಣಿನ ಸೂತಕ

ಮನದ ಸೂತಕ ಹಿಂಗಿದೊಡೆ 

ತನುವಿನ ಸೂತಕಕ್ಕೆ ತೆರಹುಂಟೇ ಅಯ್ಯ

ಮೊದಲಿಲ್ಲದ ಸೂತಕ್ಕೆ ಮರಳಾಯಿತ್ತು ಜಗವೆಲ್ಲ

ಎನ್ನ ದೇವ ಚೆನ್ನಮಲ್ಲಿಕಾರ್ಜುನನೆಂಬ

ಗುರುವಂಗೆ ಜಗವೆಲ್ಲಾ ಹೆಣ್ಣು ನೋಡಾ... 

43) ಪಂಚೇಂದ್ರಿಯದೊಳಗೆ ಒಂದಕ್ಕೆ ಪ್ರಿಯವಾದರೆ ಸಾಲದೇ?

ಸಪ್ತವ್ಯಸಂಗಳೊಳಗೆ ಒಂದಕ್ಕೆ ಪ್ರಿಯವಾದರೆ ಸಾಲದೇ?

ರತ್ನದ ಸಂಕಲೆಯಾದರೇನು ? ಬಂಧನ ಬಿಡುವದೇ? ಚೆನ್ನಮಲ್ಲಿಕಾರ್ಜುನ... 

44) ಕೂಡಿ ಕೂಡುವ ಸುಖದಿಂದ 

ಒಪ್ಪಿಚ್ಚಿ ಆಗಲಿ ಕೂಡುವ ಸುಖಲೇಸು ಕೆಳದಿ

ಬಚ್ರತ ಆಗಲಿರೆ ಕಾಣದೇ ಇರಲಾರೆ

ಎನ್ನ ದೇವ ಚೆನ್ನಮಲ್ಲಿಕಾರ್ಜುನನಗಲಿ

ಅಗಲದ ಸುಖವೆಂದಪ್ಪುದೇ...

45) ಹಂದಿಯು ಮದಕರಿಯು ಒಂದೇ ದಾರಿಯಲ್ಲಿ

ಸಂಧಿಸಿದರೆ ಹಂದಿಗಂಜಿ ಮದಕರಿ ಕೆಳಗೆ ಸರಿದರೆ

ಈ ಹಂದಿಯು ಕೇಸರಿಯಪ್ಪುದೇ ಚೆನ್ನಮಲ್ಲಿಕಾರ್ಜುನ... 

46) ಕೆಂಡದ ಶವದಂತೆ ಸೂತ್ರ ತಪ್ಪಿದ ಬೊಂಬೆಯಂತೆ

ಜಲವಿರದ ತಟಾಕದಂತೆ ಬೆಂದನುಲಿಯಂತೆ

ಮತ್ತೆ ಹಿಂದಣ ಉಂಟೇ ಅಣ್ಣ?

ಚೆನ್ನಮಲ್ಲಿಕಾರ್ಜುನ ಸಂಗವೇ ಆಶ್ರಯವಾದವಳಿಗೆ... 

47) ಕಟ್ಟಿದ ಕೆರೆಗೆ ಕೋಡಿ ಮಾಣದು

ಹುಟ್ಟಿದ ಪ್ರಾಣಿಗೆ ಪ್ರಳಯ ತಪ್ಪದಿನ್ನೆಂತಯ್ಯ

ಆರು ಹಿರಿಯರೆಲ್ಲಾ ವೃಥಾ ಕೆಟ್ಟು ಹೋದರಿನ್ನಂತಯ್ಯ

ಚೆನ್ನಮಲ್ಲಿಕಾರ್ಜುನ ದೇವನ ಗೊತ್ತು ಮುಟ್ಟಿದವರೆಲ್ಲರೂ ನಿಶ್ಚಿಂತದಾವರು... 

48) ಯೋಗಿಗೆ ಯೋಗಿಣಿಯಾಗಿಹಳು ಮಾಯೆ

ಜೋಗಿಗೆ ಜೋಗಿಣಿಯಾಗಿಹಳು ಮಾಯೆ

ಶ್ರವಣಿಗೆ ಕಂತಿಯಾದಳು ಮಾಯೆ

ಯತಿಗೆ ಪರಾರ್ಥವಾದಳು ಮಾಯೆ

ಹೆಣ್ಣಿಗೆ ಗಂಡು ಮಾಯೆ 

ಗಂಡಿಗೆ ಹೆಣ್ಣು ಮಾಯೆ

ನಿಮ್ಮ ಮಾಯೆಗೆ ನಾನಂಜುವಳಲ್ಲ ಚೆನ್ನಮಲ್ಲಿಕಾರ್ಜುನ... 

49) ಆವ ವಿದ್ಯೆ ಕಲಿತರೇನು? ಸಾವ ವಿದ್ಯೆ ಮಾಣದನ್ನಕ್ಕ

ಆಶನವ ತೊರೆದಡೇನು? ವ್ಯಸನವ ಮರೆದಡೇನು?

ಉಸಿರ ಹಿಡಿದಡೇನು? ಬಸಿರ ಕಟ್ಟಿದರೇನು?

ಚೆನ್ನಮಲ್ಲಿಕಾರ್ಜುನ ದೇವಯ್ಯ ನೆಲದಳವಾರನಾದಡೆ ಕಳ್ಳನೆಲ್ಲ ಆಗುವೆ?


4) ಸರ್ವಜ್ಞನ ವಚನಗಳು : Sarvagna Vachanagalu in Kannada

ಸರ್ವಜ್ಞನ ವಚನಗಳು : Quotes of Sarvadnya in Kannada

1) ವಿದ್ಯೆ ಕಲಿಸದ ತಂದೆ, ಬುದ್ಧಿ ಹೇಳದ ಗುರು, ಬಿದ್ದಿರಲು ಬಂದು ನೋಡದ ತಾಯಿ ಶುದ್ಧ ವೈರಿಗಳು ಸರ್ವಜ್ಞ‌... 

2) ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು, ಸುಡುವಗ್ನಿಯೊಂದೆ ಇರುತಿರಲು ಕುಲಗೋತ್ರ ನಡುವೆ ಎತ್ತಣದು ಸರ್ವಜ್ಞ...

3) ಸರ್ವಜ್ಞನೆಂಬವನು ಗರ್ವದಿಂದಾದವನೆ ಸರ್ವರೊಳೊಂದೊಂದು ನುಡಿಗಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಞ... 

4) ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು, ಮೇಟಿಯಿಂದ ರಾಟಿ ನಡೆದುದಲ್ಲದೆ ದೇಶ ದಾಟವೇ ಕೆಡಗು ಸರ್ವಜ್ಞ... 

5) ಕಾಡೆಲ್ಲ ಕಸುಗಾಯಿ, ನಾಡೆಲ್ಲ ಹೆಗ್ಗಿಡವು, ಆಡಿದ ಮಾತು ನಿಜವಿಲ್ಲ ಮಲೆನಾಡ ಕಾಡು ಸಾಕೆಂದ ಸರ್ವಜ್ಞ...

6) ಬೆಚ್ಚನಾ ಮನೆಯಾಗೆ ವೆಚ್ಚಕ್ಕೆ ಹೊನ್ನಾಗಿ, ಇಚ್ಛೆಯನ್ನರಿವ ಸತಿಯಾಗಿ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ... 

7) ಅನ್ನವನು ನೀಡುವುದು, ನನ್ನಿಯನು ನುಡಿಯುವುದು, ತನ್ನಂತೆ ಪರರ ಬಗೆದಡೆ ಕೈಲಾಸ ಬಿನ್ನಾವಣಕ್ಕು ಸರ್ವಜ್ಞ... 

8) ಕಳ್ಳರಿಗೆ ಸುಳ್ಳರಿಗೆ ಡೊಳ್ಳರಿಗೆ ಡೊಂಬರಿಗೆ ಸುಳ್ಳು ಗೊರವರಿಗೆ ಕೊಡುವವರು ಧರ್ಮಕ್ಕೆ ಎಳ್ಳಷ್ಟು ಕೊಡರು ಸರ್ವಜ್ಞ... 

9)  ಉಳ್ಳಲ್ಲಿ ಉಣ್ಣಲಿಲ್ಲ, ಉಳ್ಳಲ್ಲಿ ಉಡಲಿಲ್ಲ, ಉಣ್ಣಲ್ಲಿ ದಾನ ಕೊಡಲೊಲ್ಲದವನೊಡವೆ ಕಳ್ಳಗೆ ನೃಪಗೆ ಸರ್ವಜ್ಞ... 

10) ಬೇವು ಫಲವಾಗಲದು ಸೇವಿಸಲು ಯೋಗ್ಯವೇ? ಗಾವಿಲನ ಧನವು ಘನವಾಗಿ ಬಯ್ದಿಟ್ಟ ಠಾವಿಲೇಪೋಕು ಸರ್ವಜ್ಞ...

11) ಮಾನವರ ದುರ್ಗುಣವನೇನೆಂದು ಬಣ್ಣಿಪೆನು, ದಾನಗೆಯ್ಯನಲು ಕನಲುವರು, ದಂಡವನು ಮೌನದೀಯಿವರು ಸರ್ವಜ್ಞ... 

12) ದಾನವೆಂದರೆ ತಲೆಯ ಚಾನದಲಿ‌ ಕಡಿದಂತೆ, ತಾನೊಂದ ತಪ್ಪು ಮಾಡಿ ನೂರಾರನು ಮೌನದಿಂ ಕೊಡುವ ಸರ್ವಜ್ಞ‌... 

13) ಕಂಡವರ ದಂಡಿಸುತ, ಕೊಂಡವರ ಒಡವೆಗಳ ನುಂಡುಂಡು ಮಲಗಿ ಮಡಿದ ಮೆಲುವೆಗೆ ಯಮದಂಡ ತಪ್ಪುವುದೇ ಸರ್ವಜ್ಞ... 

14) ಹೊಲಸು ಮಾಂಸದ ಹುತ್ತ, ಎಲುವಿನ ಹಂದರವು ಹೊಲೆಬಲಿದ ತನುವಿನೊಳಗಿರ್ದುಮದರೊಳಗೆ ಕುಲವನರಸುವರೆ ಸರ್ವಜ್ಞ... 

15) ಕೋಪವೆಂಬುದು ತಾನು ಪಾಪದ ನೆಲೆಗಟ್ಟು, ಆಪತ್ತು ಸುಖವು ಸರಿಯೆಂದು ಪೋಪಗೆ ಪಾಪವೆಲ್ಲಿಹುದು ಸರ್ವಜ್ಞ... 

16) ಕಿಚ್ಚಿಂಗೆ ತಣಿವಿಲ್ಲ, ಮೊಚ್ಚೆಗೆ ಹೊಲೆಯಿಲ್ಲ, ಚುಚ್ಚಿ ಕೊಡುವಂಗೆ ಗತಿಯಿಲ್ಲ, ಯೋಗಿಗೆ ಇಚ್ಛೆಗಳಿಲ್ಲ ಸರ್ವಜ್ಞ... 

17) ಹೊಲೆಯಿಲ್ಲ ಅರಿದಂಗೆ, ಬಲವಿಲ್ಲ ಬಡವಂಗೆ, ತೊಲೆ ಕಂಬವಿಲ್ಲ ಗಗನಕ್ಕೆ, ಯೋಗಿಗೆ ಕುಲವೆಂಬುದಿಲ್ಲ ಸರ್ವಜ್ಞ... 

18) ಹಸಿವ ಕೊಂದಾತಂಗೆ, ಪಶುವಧೆಯ ಮಾಡದವಗೆ, ಹುಸಿ ಕರ್ಮ ಕಾಮವಳಿಂದಗೆ ಇಹಪರದಿ ಶಶಿಧರನೊಲಿವ ಸರ್ವಜ್ಞ...  

19) ಹಮ್ಮು ಎಂಬುವ ಕಿಚ್ಚು ಒಮ್ಮೆಲೇ ನಂದುವುದೆ? ಬೊಮ್ಮ ಹರಿ ಬೆಂದು ಜಗಬೆಂದು ದಾಕಿಚ್ಚ ಗುಮ್ಮಿಹನೆ ಯೋಗಿ ಸರ್ವಜ್ಞ... 

20) ಒಸೆದೆಂಟು ದಿಕ್ಕಿನಲ್ಲಿ ಮಿಸುನ್ನಿ ಗಿಣ್ಣಿಲುಗಿಂಡಿ ಹಸಿದು ಮಾಡುವನ ಪೂಜೆಯದು ಬೋಗಾರ ಪಸರವಿಟ್ಟಂತೇ ಸರ್ವಜ್ಞ... 

21)  ಒಪ್ಪಾದ ನುಡಿಯೇಕೆ? ಪುಷ್ಪವೇರಿಸಲೇಕೆ? ಅರ್ಪಿತದ ಗೊಡವ ತನಗೇಕೆ? ಲಿಂಗದಾ ನೆಪ್ಪನರಿಯದವಗೆ ಸರ್ವಜ್ಞ... 

22)  ಬತ್ತಿಹೆತ್ತುಪ್ಪವನು ಹತ್ತಿಸಿದ ಫಲವೇನು? ನಿತ್ಯ ನೆಲೆಗೊಳದೆ ಭಜಿಸುವಾ ಪೂಜೆ ತಾ ಹತ್ತಿಗೆಡೆಂತ ಸರ್ವಜ್ಞ... 

23) ಕೊಲುವ ಕೈಯೊಳು ಪೂಜೆ, ಮೆಲುವ ಬಾಯೊಳ ಮಂತ್ರ, ಸಲೆ ಪಾಪವೆರೆದ ಮನದೊಳಗೆ ಪೂಜಿಪನೆ ಹೊಲೆಯ ಕಾಣಯ್ಯ ಸರ್ವಜ್ಞ... 

24) ಇಂಗಿನೊಳು ನಾತವನು, ತೆಂಗಿನೊಳಗೆಳೆನೀರು, ಭೃಂಗ ಕೋಗಿಲೆಯ ಕಂಠದೊಳು ಗಾಯನವ ತುಂಬಿದವರಾರು ಸರ್ವಜ್ಞ... 

25) ಭಕ್ತರೊಡಗೂಡುವುದು, ಭಕ್ತರೊಡನಾಡುವದು, ಭಕ್ತರೊಳು ಭಕ್ತವೆರಿಸಿಪ್ಪ ಭಕ್ತನೇ ಮುಕ್ತನಾಗಿಹನು ಸರ್ವಜ್ಞ... 

26) ಹಲವು ಸಂಗದ ತಾಯಿ ಹೊಲಸು ನಾರುವ ಬಾಯಿ, ಸಲೆ ಸ್ಮರಹರನ ನೆನೆಯದಾ ಬಾಯಿ ನಾಯ್ ಮಲವ ಮೆದ್ದಂತೆ ಸರ್ವಜ್ಞ... 

27) ಎರೆಯನ್ನು ಉಳುವಂಗೆ ದೊರೆಯನ್ನು ಪಿಡಿದಂಗೆ, ಉರಗ ಭೂಷಣನ ನೆನೆವಂಗೆ ಭಾಗ್ಯವು ಅರಿದಲ್ಲವೆಂದ ಸರ್ವಜ್ಞ... 

28) ಇಂದುವಿನೊಳುರಿಯುಂಟೇ? ಸಿಂಧುವಿನೊಳರಬುಂಟೇ? ಸಂದ ವೀರನೊಳು ಭಯವುಂಟೇ? ಭಕ್ತಗೆ ಸಂದೇಹವುಂಟೆ ಸರ್ವಜ್ಞ... 

29) ಜಂಗಮನು ಭಕ್ತ ತಾಲಿಂಗದಂತಿರಬೇಕು, ಭಂಗಸಿ ಪರರನಳಿವ ಜಂಗಮನೊಂದು ಮಂಗನೆಂದರಿಗು ಸರ್ವಜ್ಞ... 

30) ಧ್ಯಾನದಾ ಹೊಸಬತ್ತಿ, ಮೌನದಾ ತಿಳಿದುಪ್ಪ, ಸ್ವಾನುಭವವೆಂಬ ಬೆಳಗಿನಾ ಜ್ಯೋತಿಯ ಜ್ಞಾನವಂ ಸುಡುಗು ಸರ್ವಜ್ಞ... 

31) ಧರೆಯ ತೇರನು ಮಾಡಿ, ಅಜನ ಸಾರಥಿ ಮಾಡಿ, ಹರಿಯು ಶರವಮಾಡಿ, ತ್ರಿಪುರವನು ಆಳಿದಂತೆ ಸರಿಯಾರು ಹೇಳಿ ಸರ್ವಜ್ಞ.. 

32) ಶ್ವಾನನಾನೆಯ ಬೊಗಳಲಾನೆ ತಾ ಬೊಗಳುವದೇ? ಜ್ಞಾನಿ ತಾ ಶ್ವಾನನಂದದಿ ಬೊಗಳಲಭಿ ಮಾನವಗಿಹುದೇ ಸರ್ವಜ್ಞ... 

33) ಲಿಂಗದಾ ಗುಡಿ ಲೇಸು, ಗಂಗೆಯಾ ತಡಿ ಲೇಸು, ಲಿಂಗ ಸಂಗಿಗಳ ನುಡಿ ಲೇಸು, ಭಕ್ತರಾ ಸಂಗವೇ ಲೇಸು ಸರ್ವಜ್ಞ... 

34) ತೆಪ್ಪವನು ನಂಬಿದಡೆ ತಪ್ಪದಲೆ ತಡಿಗಬಹುದು, ಸರ್ಪಭೂಷಣನ ನಂಬಿದಡೆ ಭವಪಾಶ ತಪ್ಪಿ ಹೋಗುವದು ಸರ್ವಜ್ಞ... 

35) ಕೊಟ್ಟಿದ್ದು ಉಳಿಯುವದೇ? ಕಟ್ಟಿದ್ದು ನಿಲ್ಲುವದೇ? ಕೆಟ್ಟ ವಿಷಯವನು, ಹೆಂಗಳನು ಬಿಡದಿರೆ ಕೆಟ್ಟಹುದು ತಪವು ಸರ್ವಜ್ಞ...

36) ಮಾತಿನಾ ಬೊಮ್ಮವೂ, ತೂತಿನಾ ಮಡಿಕೆಯೂ, ಪಾತಕನ ನೆರೆಯೂ, ಈ ಮೂರು ಲೋಕದೊಳ ಗೇತಕ್ಕು ಬೇಡ ಸರ್ವಜ್ಞ... 

37) ವೇದಶಾಸ್ತ್ರಾಗಮನ ನೋಡಿದೊಡೆ ಫಲವೇನು? ವೇದಿಸುವ ಚಿತ್ತಸಮರಸವು ಇಲ್ಲದೊಡೆ ಬೂದಿಯಲಿ ಹೋಮ ಸರ್ವಜ್ಞ...

38) ಪರ್ವತನೇರಿದೊಡೆ ಗರ್ವ ತನಗೇಕಯ್ಯ? ಸರ್ವಾಂತರ್ಯಾಮಿ ಶಿವನಿರಲು ತನ್ನೊಳಗೆ ಗರ್ವವಿಹುದೇಕೆ ಸರ್ವಜ್ಞ... 

39) ಕೋಟಿ ಗೀತವನೊದಿ ಪಾಠಯಿಸಿ ಫಲವೇನು? ಕೂಟಸ್ಥನಲ್ಲದವನೋದು ಗಿಳಿಕಲಿತ ಪಾಠದಂತಕ್ಕು ಸರ್ವಜ್ಞ... 

40) ಕಣಿಕವಿಲ್ಲದ ಊಟ, ವಿನಿತೆಯಿಲ್ಲದ ಬಾಳ್ವೆ, ಎಣಿಕೆಯಿಲ್ಲದವಳ ಮನೆವಾರ್ತೆ, ಹೊಳೆಯೊಳಗೆ ಮುಣುಗಿ ಹೋದಂತೆ ಸರ್ವಜ್ಞ... 

41) ಮೊಸರು ಇಲ್ಲದ ಊಟ, ಕೆಸರು ಇಲ್ಲದ ಗದ್ದೆ, ಹಸನವಿಲ್ಲದವಳ ಮನೆವಾರ್ತೆ ತಿಪ್ಪೆಯ ಕಸದಂತೆ ಸರ್ವಜ್ಞ... 

42) ಹೆಣ್ಣಿನಿಂದಲೇ ಇಹವು, ಹೆಣ್ಣಿನಿಂದಲೇ ಪರವು, ಹೆಣ್ಣಿನಿಂದಲೇ ಸಕಲ ಸಂಪದವು, ಹೆಣ್ಣಿಲ್ಲ ದಣ್ಣಗಳು ಎಲ್ಲಿ ಸರ್ವಜ್ಞ... 

43) ಸುಣ್ಣವೀಲ್ಯದ ವೀಳ್ಯೆ, ಬಣ್ಣವಿಲ್ಲದಾ ಮದುವೆ, ಹೆಣ್ಣಿಲ್ಲದವನ ಸಂಸಾರ, ಮಳಲೊಳಗೆ ಎಣ್ಣೆ ಹೊಯ್ದಂತೆ ಸರ್ವಜ್ಞ... 

44) ಮಕ್ಕಳಿಲ್ಲದ ಮನೆಯು ಪಕ್ಷಿ ಇಲ್ಲದ ವನವು, ದಿಕ್ಕಿಲ್ಲದವನ ಸಂಸಾರ ಕಳ್ಳನು ಮನೆ ಹೊಕ್ಕು ಹೋದಂತೆ ಸರ್ವಜ್ಞ... 

45) ಷಟಸ್ಥಲದ ಮರ್ಮವನು ಸ್ಫುಟವಾಗಿ ತಾನರಿದು, ದಿಟವಾಗಿ ನಂಬಿ ನಡೆದಿಹರೆ ಇಹದಲ್ಲಿ ಘಟಿಸುವುದು ಮುಕ್ತಿ ಸರ್ವಜ್ಞ... 
Blogger ನಿಂದ ಸಾಮರ್ಥ್ಯಹೊಂದಿದೆ.